ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೇಳುತ್ತೇನೆ, ನೀವೆಲ್ಲರೂ 2 ಬಾರಿ ಹೇಳಿ, ಅಮರ್ ರಹೇ! ಅಮರ್ ರಹೇ! (ಲಾಂಗ್ ಲಿವ್! ಲಾಂಗ್ ಲಿವ್!)
ಬಾಬಾ ಸಾಹೇಬ್ ಅಂಬೇಡ್ಕರ್, ಅಮರ್ ರಹೇ! ಅಮರ್ ರಹೇ!
ಬಾಬಾ ಸಾಹೇಬ್ ಅಂಬೇಡ್ಕರ್, ಅಮರ್ ರಹೇ! ಅಮರ್ ರಹೇ!
ಬಾಬಾ ಸಾಹೇಬ್ ಅಂಬೇಡ್ಕರ್, ಅಮರ್ ರಹೇ! ಅಮರ್ ರಹೇ!
ಹರಿಯಾಣ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಮುರಳೀಧರ್ ಮೊಹೋಲ್ ಜಿ, ಹರಿಯಾಣ ಸರ್ಕಾರದ ಎಲ್ಲಾ ಸಚಿವರು, ಸಂಸದರು ಮತ್ತು ಶಾಸಕರು ಹಾಗೂ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,
ನಮ್ಮ ಹರಿಯಾಣದ ಧೈರ್ಯಶಾಲಿ ಜನರಿಗೆ ರಾಮ್ ರಾಮ್!
ಗಟ್ಟಿಮುಟ್ಟಾದ ಸೈನಿಕರು, ಛಲವಂತ ಆಟಗಾರರು ಮತ್ತು ಮಹಾನ್ ಸಹೋದರತ್ವ, ಇದು ಹರಿಯಾಣದ ನಿಜವಾದ ಗುರುತು!
ಲಾವ್ನಿಯ ಈ ಅತ್ಯಂತ ಬ್ಯುಸಿ ಸಮಯದಲ್ಲಿ, ನೀವು ನಮ್ಮನ್ನು ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ನಾನು ನಿಮ್ಮೆಲ್ಲರನ್ನೂ, ಜನರನ್ನು ಅಭಿನಂದಿಸುತ್ತೇನೆ. ನಾನು ಗುರು ಜಂಭೇಶ್ವರ, ಮಹಾರಾಜ ಅಗ್ರಸೇನ್ ಮತ್ತು ಅಗ್ರೋಹ ಧಾಮ್ಗೆ ಗೌರವ ಸಲ್ಲಿಸುತ್ತೇನೆ.
ನನಗೆ ಹರಿಯಾಣ ಮತ್ತು ಹಿಸಾರ್ನ ಹಲವು ನೆನಪುಗಳಿವೆ. ಭಾರತೀಯ ಜನತಾ ಪಕ್ಷವು ನನಗೆ ಹರಿಯಾಣದ ಜವಾಬ್ದಾರಿ ನೀಡಿದಾಗ, ನಾನು ಇಲ್ಲಿ ಅನೇಕ ಸಹೋದ್ಯೋಗಿಗಳೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದೇನೆ. ಈ ಎಲ್ಲಾ ಸಹೋದ್ಯೋಗಿಗಳ ಕಠಿಣ ಪರಿಶ್ರಮವು ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭದ್ರ ಅಡಿಪಾಯ ಬಲಪಡಿಸಿದೆ. ಇಂದು ಅಭಿವೃದ್ಧಿ ಹೊಂದಿದ ಹರಿಯಾಣ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ಬಿಜೆಪಿ ಪೂರ್ಣ ಗಂಭೀರತೆಯಿಂದ ಕೆಲಸ ಮಾಡುತ್ತಿದೆ ಎಂಬುದನ್ನು ನೋಡಿ ನನಗೆ ಹೆಮ್ಮೆ ಅನಿಸುತ್ತದೆ.
ಸ್ನೇಹಿತರೆ,
ಇಂದು ನಮಗೆಲ್ಲರಿಗೂ, ಇಡೀ ದೇಶಕ್ಕೆ ಮತ್ತು ವಿಶೇಷವಾಗಿ ದಲಿತರು, ದಮನಿತರು, ವಂಚಿತರು ಮತ್ತು ಶೋಷಿತರಿಗೆ ಬಹಳ ಮುಖ್ಯವಾದ ದಿನ. ಇದು ಅವರ ಜೀವನದಲ್ಲಿ ಬಂದ 2ನೇ ದೀಪಾವಳಿ. ಇಂದು ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ. ಅವರ ಜೀವನ, ಅವರ ಹೋರಾಟ, ಅವರ ಜೀವನ ಸಂದೇಶವು ನಮ್ಮ ಸರ್ಕಾರದ 11 ವರ್ಷಗಳ ನಿರಂತರ ಪ್ರಯಾಣದ ಸ್ಫೂರ್ತಿಗೆ ಆಧಾರಸ್ತಂಭವಾಗಿದೆ. ಪ್ರತಿ ದಿನ, ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ನೀತಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಮರ್ಪಿಸಲಾಗಿದೆ. ವಂಚಿತರು, ದಮನಿತರು, ಶೋಷಿತರು, ಬಡವರು, ಬುಡಕಟ್ಟು ಸಮುದಾಯ ಮತ್ತು ಮಹಿಳೆಯರ ಜೀವನದಲ್ಲಿ ಬದಲಾವಣೆ ತರುವುದು, ಅವರ ಕನಸುಗಳನ್ನು ನನಸಾಗಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ, ನಿರಂತರ ಅಭಿವೃದ್ಧಿ, ತ್ವರಿತ ಅಭಿವೃದ್ಧಿಯು ಬಿಜೆಪಿ ಸರ್ಕಾರದ ಮಂತ್ರವಾಗಿದೆ.
ಸ್ನೇಹಿತರೆ,
ಈ ಮಂತ್ರವನ್ನು ಅನುಸರಿಸಿ, ಇಂದು ಹರಿಯಾಣದಿಂದ ಅಯೋಧ್ಯಾ ಧಾಮಕ್ಕೆ ವಿಮಾನ ಹಾರಾಟ ಪ್ರಾರಂಭವಾಗಿದೆ. ಇದರರ್ಥ ಈಗ ಶ್ರೀ ಕೃಷ್ಣನ ಪವಿತ್ರ ಭೂಮಿಯನ್ನು ಭಗವಾನ್ ರಾಮನ ನಗರಕ್ಕೆ ನೇರವಾಗಿ ಸಂಪರ್ಕಿಸಲಾಗಿದೆ. ಈಗ ಅಗ್ರಸೇನ್ ವಿಮಾನ ನಿಲ್ದಾಣದಿಂದ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ನೇರ ವಿಮಾನಗಳ ಹಾರಾಟ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಇತರೆ ನಗರಗಳಿಗೆ ವಿಮಾನಗಳು ಇಲ್ಲಿಂದ ಪ್ರಾರಂಭವಾಗಲಿವೆ. ಇಂದು ಹಿಸಾರ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಹರಿಯಾಣದ ಆಕಾಂಕ್ಷೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಆರಂಭವಾಗಿದೆ. ಈ ಹೊಸ ಆರಂಭಕ್ಕಾಗಿ ಹರಿಯಾಣದ ಜನರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಚಪ್ಪಲಿ ಧರಿಸಿದವರೂ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ ಎಂಬುದು ನನ್ನ ಭರವಸೆಯಾಗಿದೆ, ದೇಶಾದ್ಯಂತ ಈ ಭರವಸೆ ಈಡೇರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ, ಕೋಟ್ಯಂತರ ಭಾರತೀಯರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಉತ್ತಮ ರೈಲ್ವೆ ನಿಲ್ದಾಣಗಳಿಲ್ಲದ ಸ್ಥಳಗಳಲ್ಲೂ ನಾವು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ. 2014ರ ಮೊದಲು, ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ಊಹಿಸಿ, 70 ವರ್ಷಗಳಲ್ಲಿ 74 ವಿಮಾನ ನಿಲ್ದಾಣಗಳು ಇದ್ದವು, ಇಂದು ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 150 ದಾಟಿದೆ. ದೇಶದ ಸುಮಾರು 90 ವಿಮಾನ ನಿಲ್ದಾಣಗಳು ಉಡಾನ್ ಯೋಜನೆಯೊಂದಿಗೆ ಸಂಪರ್ಕ ಹೊಂದಿವೆ. ಉಡಾನ್ ಯೋಜನೆಯಡಿ, 600ಕ್ಕೂ ಹೆಚ್ಚು ಮಾರ್ಗಗಳಲ್ಲಿ ವೈಮಾನಿಕ ಸೇವೆಗಳು ನಡೆಯುತ್ತಿವೆ. ಜನರು ಕಡಿಮೆ ವೆಚ್ಚದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಪ್ರತಿ ವರ್ಷ ವಿಮಾನ ಪ್ರಯಾಣಿಕರ ಹೊಸ ದಾಖಲೆಯನ್ನು ಮಾಡಲಾಗುತ್ತಿದೆ. ನಮ್ಮ ವಿಮಾನಯಾನ ಕಂಪನಿಗಳು ದಾಖಲೆಯ 2 ಸಾವಿರ ಹೊಸ ವಿಮಾನಗಳನ್ನು ಆರ್ಡರ್ ಮಾಡಿವೆ. ಹೆಚ್ಚು ಹೊಸ ವಿಮಾನಗಳು ಬಂದಂತೆ, ಪೈಲಟ್ಗಳಾಗಿ ಅಥವಾ ಏರ್ ಹೋಸ್ಟೆಸ್ಗಳಾಗಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ. ನೂರಾರು ಹೊಸ ಸೇವೆಗಳು ಸಹ ಇವೆ. ವಿಮಾನ ಹಾರಾಟ ನಡೆಸಿದಾಗ, ನೆಲದ ಸಿಬ್ಬಂದಿ ಇರುತ್ತಾರೆ, ಹೀಗೆ ಹಲವಾರು ಉದ್ಯೋಗಗಳಿವೆ. ಯುವಕರು ಅಂತಹ ಅನೇಕ ಸೇವೆಗಳಿಗೆ ಉದ್ಯೋಗಾವಕಾಶ ಪಡೆಯುತ್ತಾರೆ. ಇದು ಮಾತ್ರವಲ್ಲದೆ, ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದ ದೊಡ್ಡ ವಲಯವು ಲೆಕ್ಕವಿಲ್ಲದಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಹಿಸಾರ್ನ ಈ ವಿಮಾನ ನಿಲ್ದಾಣವು ಹರಿಯಾಣದ ಯುವಕರ ಕನಸುಗಳಿಗೆ ಹೊಸ ಎತ್ತರವನ್ನು ನೀಡುತ್ತದೆ.
ಸ್ನೇಹಿತರೆ,
ಒಂದೆಡೆ, ನಮ್ಮ ಸರ್ಕಾರ ಸಂಪರ್ಕಕ್ಕೆ ಒತ್ತು ನೀಡುತ್ತಿದೆ. ಮತ್ತೊಂದೆಡೆ, ಬಡವರ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತಿದೆ. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು. ಇದು ನಮ್ಮ ಸಂವಿಧಾನ ಶಿಲ್ಪಿಗಳ ಆಶಯವಾಗಿತ್ತು. ದೇಶಕ್ಕಾಗಿ ಬಲಿದಾನಕ್ಕೆ ಸಿದ್ಧರಿದ್ದವರ ಕನಸಾಗಿತ್ತು, ಆದರೆ ಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ್ದನ್ನು ನಾವು ಎಂದಿಗೂ ಮರೆಯಬಾರದು. ಬಾಬಾ ಸಾಹೇಬ್ ಜೀವಂತವಾಗಿರುವವರೆಗೂ ಕಾಂಗ್ರೆಸ್ ಅವರನ್ನು ಅವಮಾನಿಸಿತು. ಅವರು 2 ಬಾರಿ ಚುನಾವಣೆಗಳಲ್ಲಿ ಸೋಲುವಂತೆ ಮಾಡಲಾಗಿತ್ತು, ಇಡೀ ಕಾಂಗ್ರೆಸ್ ಸರ್ಕಾರ ಅವರನ್ನು ಪದಚ್ಯುತಗೊಳಿಸುವಲ್ಲಿ ನಿರತವಾಗಿತ್ತು. ಅವರನ್ನು ವ್ಯವಸ್ಥೆಯಿಂದ ದೂರವಿಡಲು ಪಿತೂರಿ ನಡೆಸಲಾಯಿತು. ಬಾಬಾ ಸಾಹೇಬ್ ನಮ್ಮ ನಡುವೆ ಇಲ್ಲದಿದ್ದಾಗ, ಕಾಂಗ್ರೆಸ್ ಅವರ ಸ್ಮರಣೆಯನ್ನು ಸಹ ಅಳಿಸಲು ಪ್ರಯತ್ನಿಸಿತು. ಕಾಂಗ್ರೆಸ್ ಬಾಬಾ ಸಾಹೇಬ್ ಅವರ ವಿಚಾರಗಳನ್ನು ಶಾಶ್ವತವಾಗಿ ನಾಶ ಮಾಡಲು ಪ್ರಯತ್ನಿಸಿತು. ಡಾ. ಅಂಬೇಡ್ಕರ್ ಸಂವಿಧಾನದ ರಕ್ಷಕರಾಗಿದ್ದರು. ಕಾಂಗ್ರೆಸ್ ಸಂವಿಧಾನದ ವಿಧ್ವಂಸಕವಾಗಿದೆ. ಡಾ. ಅಂಬೇಡ್ಕರ್ ಸಮಾನತೆ ತರಲು ಬಯಸಿದ್ದರು, ಆದರೆ ಕಾಂಗ್ರೆಸ್ ದೇಶದಲ್ಲಿ ಮತ ಬ್ಯಾಂಕ್ಗಳ ವೈರಸ್ ಹರಡಿತು.
ಸ್ನೇಹಿತರೆ,
ಪ್ರತಿಯೊಬ್ಬ ಬಡವರು, ವಂಚಿತ ವ್ಯಕ್ತಿಯೂ ಘನತೆಯಿಂದ ಬದುಕಬೇಕು, ತಲೆ ಎತ್ತಿ ಬದುಕಬೇಕು, ಕನಸು ಕಾಣಬೇಕು ಮತ್ತು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದು ಬಾಬಾ ಸಾಹೇಬರು ಬಯಸಿದ್ದರು. ಆದರೆ ಕಾಂಗ್ರೆಸ್ ಎಸ್ಸಿ, ಎಸ್ಟಿ, ಒಬಿಸಿಗಳನ್ನು 2ನೇ ದರ್ಜೆಯ ನಾಗರಿಕರನ್ನಾಗಿ ಮಾಡಿತು. ಕಾಂಗ್ರೆಸ್ನ ದೀರ್ಘ ಆಳ್ವಿಕೆಯಲ್ಲಿ, ಕಾಂಗ್ರೆಸ್ ನಾಯಕರ ಈಜುಕೊಳಗಳಿಗೆ ನೀರು ತಲುಪಿತು, ಆದರೆ ಹಳ್ಳಿಗಳಲ್ಲಿ ನಲ್ಲಿ ನೀರು ಇರಲಿಲ್ಲ. ಸ್ವಾತಂತ್ರ್ಯದ 70 ವರ್ಷಗಳ ನಂತರವೂ, ಹಳ್ಳಿಗಳಲ್ಲಿರುವ ಕೇವಲ 16 ಪ್ರತಿಶತದಷ್ಟು ಮನೆಗಳಲ್ಲಿ ಮಾತ್ರ ನಲ್ಲಿ ನೀರು ಇತ್ತು. ಊಹಿಸಿ, 100ರಲ್ಲಿ 16 ಮನೆಗಳು! ಇದರಿಂದ ಹೆಚ್ಚು ಪರಿಣಾಮ ಬೀರಿದದ್ದು ಯಾರಿಗೆ? ಎಸ್ಸಿ, ಎಸ್ಟಿ, ಒಬಿಸಿಗಳು ಇದರಿಂದ ಹೆಚ್ಚು ಪರಿಣಾಮ ಅನುಭವಿಸಿದರು. ಇಂದು ಬೀದಿಯಿಂದ ಬೀದಿಗೆ ಭಾಷಣ ಮಾಡುತ್ತಿರುವವರು, ಕನಿಷ್ಠ ನನ್ನ ಎಸ್ಸಿ, ಎಸ್ಟಿ, ಒಬಿಸಿ ಸಹೋದರರ ಮನೆಗಳಿಗೆ ನೀರು ಒದಗಿಸಬೇಕಾಗಿತ್ತು. ನಮ್ಮ ಸರ್ಕಾರ 6-7 ವರ್ಷಗಳಲ್ಲಿ 12 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಿದೆ. ಇಂದು, ಹಳ್ಳಿಯಲ್ಲಿರುವ ಶೇಕಡ 80ರಷ್ಟು ಮನೆಗಳು, ಅಂದರೆ ಮೊದಲು 100ರಲ್ಲಿ 16, ಇಂದು 100 ರಲ್ಲಿ 80 ಮನೆಗಳಿಗೆ ನಲ್ಲಿ ನೀರು ಸಿಗುತ್ತಿದೆ. ಬಾಬಾ ಸಾಹೇಬರ ಆಶೀರ್ವಾದದಿಂದ, ನಾವು ಪ್ರತಿ ಮನೆಗೆ ನಲ್ಲಿ ನೀರು ಒದಗಿಸುತ್ತೇವೆ. ಶೌಚಾಲಯಗಳಿಲ್ಲದಿದ್ದರೂ ಸಹ, ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿತ್ತು. ನಮ್ಮ ಸರ್ಕಾರವು 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿ, ಸೌಲಭ್ಯ ವಂಚಿತರಿಗೆ ಘನತೆಯ ಜೀವನ ನೀಡಿದೆ.
ಸ್ನೇಹಿತರೆ,
ಕಾಂಗ್ರೆಸ್ ಆಡಳಿತ ಸಮಯದಲ್ಲಿ, ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಬ್ಯಾಂಕುಗಳ ಬಾಗಿಲುಗಳು ಸಹ ತೆರೆದಿರಲಿಲ್ಲ. ವಿಮೆ, ಸಾಲಗಳು, ಸಹಾಯ, ಇದೆಲ್ಲವೂ ಕನಸಾಗಿತ್ತು. ಆದರೆ ಈಗ, ಜನ ಧನ್ ಖಾತೆಗಳ ಅತಿದೊಡ್ಡ ಫಲಾನುಭವಿಗಳು ನನ್ನ ಎಸ್ಸಿ, ಎಸ್ಟಿ, ಒಬಿಸಿ ಸಹೋದರ ಸಹೋದರಿಯರು. ನಮ್ಮ ಎಸ್ಸಿ, ಎಸ್ಟಿ, ಒಬಿಸಿ ಸಹೋದರ ಸಹೋದರಿಯರು ಇಂದು ಹೆಮ್ಮೆಯಿಂದ ತಮ್ಮ ಜೇಬಿನಿಂದ ರುಪೇ ಕಾರ್ಡ್ಗಳನ್ನು ಹೊರತೆಗೆದು ತೋರಿಸುತ್ತಾರೆ. ಶ್ರೀಮಂತರ ಜೇಬಿನಲ್ಲಿದ್ದ ರುಪೇ ಕಾರ್ಡ್ಗಳನ್ನು ಈಗ ನನ್ನ ಬಡವರು ತೋರಿಸುತ್ತಿದ್ದಾರೆ.
ಸ್ನೇಹಿತರೆ,
ಕಾಂಗ್ರೆಸ್ ನಮ್ಮ ಪವಿತ್ರ ಸಂವಿಧಾನವನ್ನು ಅಧಿಕಾರ ಪಡೆಯಲು ಒಂದು ಅಸ್ತ್ರವನ್ನಾಗಿ ಮಾಡಿತ್ತು. ಕಾಂಗ್ರೆಸ್ ಅಧಿಕಾರ ಬಿಕ್ಕಟ್ಟು ಎದುರಿಸುವಾಗ ಅವರು ಸಂವಿಧಾನವನ್ನು ಪುಡಿಪುಡಿ ಮಾಡಿದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ಸಂವಿಧಾನದ ಚೈತನ್ಯವನ್ನು ಪುಡಿಪುಡಿ ಮಾಡಿತು, ಇದರಿಂದ ಅದು ಹೇಗಾದರೂ ಅಧಿಕಾರ ಉಳಿಸಿಕೊಳ್ಳಬಹುದು. ಸಂವಿಧಾನದ ಚೈತನ್ಯವೆಂದರೆ ಎಲ್ಲರಿಗೂ ಏಕರೂಪ ನಾಗರಿಕ ಸಂಹಿತೆ ಇರಬೇಕು, ಅದನ್ನು ನಾನು ಜಾತ್ಯತೀತ ನಾಗರಿಕ ಸಂಹಿತೆ ಎಂದು ಕರೆಯುತ್ತೇನೆ, ಆದರೆ ಕಾಂಗ್ರೆಸ್ ಅದನ್ನು ಎಂದಿಗೂ ಜಾರಿಗೆ ತರಲಿಲ್ಲ. ಉತ್ತರಾಖಂಡದಲ್ಲಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಜಾತ್ಯತೀತ ನಾಗರಿಕ ಸಂಹಿತೆ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಯಿತು, ಅದನ್ನು ಬಹಳ ಸಂಭ್ರಮದಿಂದ ಜಾರಿಗೆ ತರಲಾಯಿತು. ದೇಶದ ದುರದೃಷ್ಟ ಏನೆಂದರೆ, ಸಂವಿಧಾನವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಕುಳಿತ ಜನರು, ಸಂವಿಧಾನದ ಮೇಲೆ ಕುಳಿತ ಜನರು, ಈ ಕಾಂಗ್ರೆಸ್ ಜನರು ಅದನ್ನೂ ವಿರೋಧಿಸುತ್ತಿದ್ದಾರೆ.
ಸ್ನೇಹಿತರೆ,
ನಮ್ಮ ಸಂವಿಧಾನವು ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಮೀಸಲಾತಿ ಒದಗಿಸಿದೆ. ಆದರೆ ಕಾಂಗ್ರೆಸ್, ಅವರಿಗೆ ಮೀಸಲಾತಿ ನೀಡಲಾಗಿದೆಯೋ ಇಲ್ಲವೋ, ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳು ಸಿಗಲು ಪ್ರಾರಂಭಿಸಿವೆಯೋ ಇಲ್ಲವೋ, ಯಾವುದೇ ಎಸ್ಸಿ, ಎಸ್ಟಿ, ಒಬಿಸಿ ವ್ಯಕ್ತಿ ತನ್ನ ಹಕ್ಕುಗಳಿಂದ ವಂಚಿತನಾಗಿದ್ದಾನೆಯೋ ಇಲ್ಲವೋ ಎಂದು ಚಿಂತಿಸಲಿಲ್ಲ. ಆದರೆ ರಾಜಕೀಯ ಆಟವಾಡುವ ಸಲುವಾಗಿ, ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನದಲ್ಲಿ ಮಾಡಲಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸುಗಳ ಬೆನ್ನಿಗೆ ಚೂರಿ ಹಾಕಿತು, ಸಂವಿಧಾನದ ಆ ನಿಬಂಧನೆಯನ್ನು ಸಮಾಧಾನಪಡಿಸುವ ಸಾಧನವನ್ನಾಗಿ ಮಾಡಿತು. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಸ್ಸಿ, ಎಸ್ಟಿ, ಒಬಿಸಿಗಳ ಹಕ್ಕುಗಳನ್ನು ಕಸಿದುಕೊಂಡು ಟೆಂಡರ್ಗಳಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿದೆ ಎಂದು ನೀವು ಇತ್ತೀಚೆಗೆ ಸುದ್ದಿಗಳಲ್ಲಿ ಕೇಳಿರಬೇಕು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು, ನಮ್ಮ ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನಿಷೇಧಿಸಿದೆ.
ಸ್ನೇಹಿತರೆ,
ಕಾಂಗ್ರೆಸ್ನ ಈ ಸಮಾಧಾನಗೊಳಿಸುವ ನೀತಿಯಿಂದಾಗಿ ಮುಸ್ಲಿಂ ಸಮುದಾಯವೂ ದೊಡ್ಡ ನಷ್ಟ ಅನುಭವಿಸಿದೆ. ಕಾಂಗ್ರೆಸ್ ಕೆಲವೇ ಮೂಲಭೂತವಾದಿಗಳನ್ನು ಸಂತೋಷಪಡಿಸಿತು. ಉಳಿದ ಸಮುದಾಯದವರು ಶೋಚನೀಯರು, ಅಶಿಕ್ಷಿತರು ಮತ್ತು ಬಡವರಾಗಿ ಉಳಿದರು. ಕಾಂಗ್ರೆಸ್ನ ಈ ಕೆಟ್ಟ ನೀತಿಗೆ ದೊಡ್ಡ ಪುರಾವೆ ವಕ್ಫ್ ಕಾಯ್ದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ವಕ್ಫ್ ಕಾಯ್ದೆ 2013 ರವರೆಗೆ ಜಾರಿಯಲ್ಲಿತ್ತು, ಆದರೆ ಚುನಾವಣೆಗಳನ್ನು ಗೆಲ್ಲಲು, ಓಲೈಕೆಯ ರಾಜಕೀಯಕ್ಕಾಗಿ, ಮತ ಬ್ಯಾಂಕ್ ರಾಜಕೀಯಕ್ಕಾಗಿ, 2013ರ ಕೊನೆಯಲ್ಲಿ, ಕಳೆದ ಅಧಿವೇಶನದಲ್ಲಿ, ಕಾಂಗ್ರೆಸ್ ಹಲವು ವರ್ಷಗಳಿಂದ ಜಾರಿಯಲ್ಲಿದ್ದ ವಕ್ಫ್ ಕಾಯ್ದೆಯನ್ನು ಆತುರದಿಂದ ತಿದ್ದುಪಡಿ ಮಾಡಿತು, ಇದರಿಂದ ಅದು ಚುನಾವಣೆಯಲ್ಲಿ ಮತಗಳನ್ನು ಪಡೆಯಬಹುದು. ಮತ ಬ್ಯಾಂಕ್ ಅನ್ನು ಸಮಾಧಾನಪಡಿಸಲು, ಈ ಕಾನೂನನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಹಾಳು ಮಾಡುವ ಮತ್ತು ಸಂವಿಧಾನಕ್ಕಿಂತ ಮೇಲಿರುವ ರೀತಿಯಲ್ಲಿ ಮಾಡಲಾಗಿದೆ. ಇದು ಬಾಬಾ ಸಾಹೇಬ್ಗೆ ಮಾಡಿದ ದೊಡ್ಡ ಅವಮಾನವಾಗಿತ್ತು.
ಸ್ನೇಹಿತರೆ,
ಮುಸ್ಲಿಮರ ಹಿತಾಸಕ್ತಿಗಾಗಿ ಇದನ್ನು ಮಾಡಿದ್ದಾರೆಂದು ಅವರು ಹೇಳುತ್ತಾರೆ. ನಾನು ಈ ಎಲ್ಲ ಜನರನ್ನು ಕೇಳಲು ಬಯಸುತ್ತೇನೆ, ಈ ಮತ ಬ್ಯಾಂಕ್ ಹಸಿದ ರಾಜಕಾರಣಿಗಳಿಗೆ ಎಂದು ಹೇಳಲು ಬಯಸುತ್ತೇನೆ, ನಿಮ್ಮ ಹೃದಯದಲ್ಲಿ ನಿಜವಾಗಿಯೂ ಮುಸ್ಲಿಮರ ಬಗ್ಗೆ ಸ್ವಲ್ಪವಾದರೂ ಸಹಾನುಭೂತಿ ಇದ್ದರೆ, ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಏಕೆ ಅಧ್ಯಕ್ಷರನ್ನಾಗಿ ಮಾಡುವುದಿಲ್ಲ? ಅವರು ಸಂಸತ್ತಿಗೆ ಟಿಕೆಟ್ ನೀಡುತ್ತಾರೆ, ಇದರಲ್ಲಿ 50% ಮುಸ್ಲಿಮರಿಗೆ ನೀಡುತ್ತಾರೆ. ಅವರು ಗೆದ್ದಾಗ, ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಹಿರಿಯ ನಾಯಕರು ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಲು ಬಯಸುವುದಿಲ್ಲ, ಅವರು ಕಾಂಗ್ರೆಸ್ನಲ್ಲಿ ಏನನ್ನೂ ನೀಡಲು ಬಯಸುವುದಿಲ್ಲ. ದೇಶ ಮತ್ತು ಅದರ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವುದು ಮತ್ತು ಬಿಟ್ಟುಕೊಡುವುದು, ಅವರ ಉದ್ದೇಶ ಯಾರಿಗೂ ಒಳ್ಳೆಯದನ್ನು ಮಾಡುವುದು ಅಲ್ಲ, ಮುಸ್ಲಿಮರಿಗೂ ಒಳ್ಳೆಯದನ್ನು ಮಾಡುವುದು ಕೂಡ ಅಲ್ಲ. ಇದು ಕಾಂಗ್ರೆಸ್ ಬಗ್ಗೆ ಇರುವ ಅತ್ಯುತ್ತಮ ಸತ್ಯ.
ಸ್ನೇಹಿತರೆ,
ದೇಶಾದ್ಯಂತ ವಕ್ಫ್ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ಇದೆ. ಈ ಭೂಮಿ, ಈ ಆಸ್ತಿ ಬಡವರು, ಅಸಹಾಯಕ ಮಹಿಳೆಯರು ಮತ್ತು ಮಕ್ಕಳಿಗೆ ಪ್ರಯೋಜನವಾಗಬೇಕಿತ್ತು. ಇಂದು ಇದನ್ನು ಪ್ರಾಮಾಣಿಕವಾಗಿ ಬಳಸಿದ್ದರೆ, ನನ್ನ ಮುಸ್ಲಿಂ ಯುವಕರು ಪಂಕ್ಚರ್ ಆದ ಸೈಕಲ್ಗಳನ್ನು ದುರಸ್ತಿ ಮಾಡಲು ತಮ್ಮ ಜೀವನವನ್ನು ಕಳೆಯಬೇಕಾಗಿರಲಿಲ್ಲ. ಆದರೆ ಇದು ಬೆರಳೆಣಿಕೆಯಷ್ಟು ಭೂ ಮಾಫಿಯಾಗಳಿಗೆ ಮಾತ್ರ ಪ್ರಯೋಜನ ನೀಡಿತು. ಪಾಸ್ಮಾಂಡಾ ಮುಸ್ಲಿಮ್ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ಈ ಭೂ ಮಾಫಿಯಾಗಳು ಯಾರ ಭೂಮಿಯನ್ನು ಲೂಟಿ ಮಾಡುತ್ತಿದ್ದರು? ಅವರು ದಲಿತರು, ಹಿಂದುಳಿದವರು, ಬುಡಕಟ್ಟು ಜನರ ಭೂಮಿ ಮತ್ತು ವಿಧವೆಯರ ಆಸ್ತಿಯನ್ನು ಲೂಟಿ ಮಾಡುತ್ತಿದ್ದರು. ನೂರಾರು ಮುಸ್ಲಿಂ ವಿಧವೆಯರು ಭಾರತ ಸರ್ಕಾರಕ್ಕೆ ಪತ್ರಗಳನ್ನು ಬರೆದರು, ಆಗ ಮಾತ್ರ ಈ ಕಾನೂನು ಚರ್ಚೆಗೆ ಬಂದಿತು. ವಕ್ಫ್ ಕಾನೂನಿನ ಬದಲಾವಣೆಯ ನಂತರ, ಬಡವರ ಮೇಲಿನ ಈ ಲೂಟಿ ನಿಲ್ಲಲಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ನಾವು ಬಹಳ ಜವಾಬ್ದಾರಿಯುತ ಮತ್ತು ಮಹತ್ವದ ಕೆಲಸವನ್ನು ಮಾಡಿದ್ದೇವೆ. ಈ ವಕ್ಫ್ ಕಾನೂನಿನಲ್ಲಿ ನಾವು ಮತ್ತೊಂದು ನಿಬಂಧನೆಯನ್ನು ಮಾಡಿದ್ದೇವೆ. ಈಗ, ಹೊಸ ಕಾನೂನಿನ ಅಡಿ, ವಕ್ಫ್ ಕಾನೂನಿನ ಅಡಿ, ವಕ್ಫ್ ಮಂಡಳಿಯು ಭಾರತದ ಯಾವುದೇ ಮೂಲೆಯಲ್ಲಿರುವ ಯಾವುದೇ ಬುಡಕಟ್ಟು ಜನಾಂಗದ ಭೂಮಿ, ಮನೆ, ಆಸ್ತಿಯನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಸಂವಿಧಾನದ ಮಿತಿಗಳನ್ನು ಅನುಸರಿಸಿ ಬುಡಕಟ್ಟು ಜನಾಂಗದವರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಾವು ಉತ್ತಮ ಕೆಲಸ ಮಾಡಿದ್ದೇವೆ. ಈ ನಿಬಂಧನೆಗಳು ವಕ್ಫ್ನ ಪವಿತ್ರ ಮನೋಭಾವವನ್ನು ಗೌರವಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಮುಸ್ಲಿಂ ಸಮಾಜದ ಬಡವರು ಮತ್ತು ಪಸ್ಮಾಂಡ ಕುಟುಂಬಗಳು, ಮುಸ್ಲಿಂ ಮಹಿಳೆಯರು, ವಿಶೇಷವಾಗಿ ಮುಸ್ಲಿಂ ವಿಧವೆಯರು, ಮುಸ್ಲಿಂ ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯುತ್ತಾರೆ, ಭವಿಷ್ಯದಲ್ಲಿ ಅವರ ಹಕ್ಕುಗಳನ್ನು ರಕ್ಷಿಸಲಾಗುತ್ತದೆ. ಇದು ಸಂವಿಧಾನದ ಉತ್ಸಾಹದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ನೀಡಿರುವ ಕಾರ್ಯ. ಇದು ನಿಜವಾದ ಚೈತನ್ಯ, ಇದು ನಿಜವಾದ ಸಾಮಾಜಿಕ ನ್ಯಾಯ.
2014ರ ನಂತರ, ನಮ್ಮ ಸರ್ಕಾರವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಫೂರ್ತಿಯನ್ನು ಮುಂದಿನ ಪೀಳಿಗೆಗೆ ಹರಡಲು ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಬಾಬಾ ಸಾಹೇಬ್ ದೇಶ ಮತ್ತು ಜಗತ್ತಿನಲ್ಲಿ ವಾಸಿಸುತ್ತಿದ್ದ ಎಲ್ಲಾ ಸ್ಥಳಗಳನ್ನು ನಿರ್ಲಕ್ಷಿಸಲಾಯಿತು. ಸಂವಿಧಾನದ ಹೆಸರಿನಲ್ಲಿ ರಾಜಕೀಯ ಲಾಭ ಗಳಿಸಲು ಹೊರಟವರು ಬಾಬಾ ಸಾಹೇಬ್ಗೆ ಸಂಬಂಧಿಸಿದ ಪ್ರತಿಯೊಂದು ಸ್ಥಳವನ್ನು ಅವಮಾನಿಸಿದ್ದಾರೆ, ಅವರನ್ನು ಇತಿಹಾಸದಿಂದ ಅಳಿಸಿಹಾಕಲು ಪ್ರಯತ್ನಿಸಿದ್ದಾರೆ. ಮುಂಬೈನ ಇಂದು ಮಿಲ್ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಿಸಲು ಜನರು ದೇಶಾದ್ಯಂತ ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಇಂದು ಮಿಲ್ ಜತೆಗೆ, ನಾವು ಎಲ್ಲಾ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದೇವೆ, ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಸ್ಥಳವಾಗಿರಬಹುದು, ಲಂಡನ್ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣ ಸ್ಥಳವಾಗಿರಬಹುದು, ದೆಹಲಿಯ ಮಹಾಪರಿನಿರ್ವಾಣ ಸ್ಥಳವಾಗಿರಬಹುದು ಅಥವಾ ನಾಗ್ಪುರದ ದೀಕ್ಷಭೂಮಿಯಾಗಿರಬಹುದು. ಇವುಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಲು ದೀಕ್ಷಭೂಮಿ ಮತ್ತು ನಾಗ್ಪುರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.
ಸ್ನೇಹಿತರೆ,
ಕಾಂಗ್ರೆಸ್ ಜನರು ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ, ಆದರೆ ಕಾಂಗ್ರೆಸ್ ಈ ಇಬ್ಬರು ಮಹಾನ್ ಪುತ್ರರಾದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಚೌಧರಿ ಚರಣ್ ಸಿಂಗ್ ಜಿ ಅವರಿಗೆ ಭಾರತ ರತ್ನ ನೀಡಲಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ರಚನೆಯಾದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಾಯಿತು. ಅದೇ ಸಮಯದಲ್ಲಿ, ಬಿಜೆಪಿ ಸರ್ಕಾರವು ಚೌಧರಿ ಚರಣ್ ಸಿಂಗ್ ಜಿ ಅವರಿಗೆ ಭಾರತ ರತ್ನ ನೀಡಿದೆ ಎಂಬ ಹೆಮ್ಮೆ ನಮಗಿದೆ.
ಸ್ನೇಹಿತರೆ,
ಹರಿಯಾಣದ ಬಿಜೆಪಿ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಬಡವರ ಕಲ್ಯಾಣದ ಹಾದಿಯನ್ನು ನಿರಂತರವಾಗಿ ಸಬಲೀಕರಣಗೊಳಿಸುತ್ತಿದೆ. ಹರಿಯಾಣದಲ್ಲಿ ಸರ್ಕಾರಿ ಉದ್ಯೋಗಗಳ ಸ್ಥಿತಿ ಹೇಗಿತ್ತು ಎಂದು ನಿಮಗೆಲ್ಲರಿಗೂ ತಿಳಿದಿದೆ. ಹಿಂದೆ ಹೀಗೆಯೇ ಇತ್ತು, ಕೆಲಸ ಸಿಗಬೇಕೆಂದರೆ, ಯಾವುದಾದರೂ ನಾಯಕನ ಬಳಿ ಹೋಗಿ ಅಥವಾ ಹಣ ನೀಡಿ. ತಂದೆಯ ಭೂಮಿ ಮತ್ತು ತಾಯಿಯ ಆಭರಣಗಳನ್ನು ಸಹ ಮಾರಾಟ ಮಾಡಲಾಗುತ್ತಿತ್ತು. ನಯಾಬ್ ಸಿಂಗ್ ಸೈನಿ ಜಿ ಅವರ ಸರ್ಕಾರವು ಕಾಂಗ್ರೆಸ್ನ ಈ ಮಾರಕ ರೋಗವನ್ನು ಗುಣಪಡಿಸಿದೆ ಎಂಬುದು ನನಗೆ ಸಂತೋಷವಾಗಿದೆ. ಯಾವುದೇ ಖರ್ಚು ಮತ್ತು ಯಾವುದೇ ಚೀಟಿಗಳಿಲ್ಲದೆ ಉದ್ಯೋಗಗಳನ್ನು ನೀಡುವ ಹರಿಯಾಣದ ದಾಖಲೆ ಅದ್ಭುತವಾಗಿದೆ. ನನಗೆ ಅಂತಹ ಸ್ನೇಹಿತರು, ಅಂತಹ ಪಾಲುದಾರ-ಸರ್ಕಾರ ಸಿಕ್ಕಿದೆ ಎಂಬ ಹೆಮ್ಮೆ ನನಗಿದೆ. ಇಲ್ಲಿ 25 ಸಾವಿರ ಯುವಕರಿಗೆ ಸರ್ಕಾರಿ ಉದ್ಯೋಗಗಳು ಸಿಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ತನ್ನ ಅತ್ಯುತ್ತಮ ಪ್ರಯತ್ನ ಮಾಡಿತ್ತು. ಆದರೆ ಒಂದು ಕಡೆ ಮುಖ್ಯಮಂತ್ರಿ ನೈಬ್ ಸೈನಿ ಜಿ ಪ್ರಮಾಣ ವಚನ ಸ್ವೀಕರಿಸಿದರು, ಮತ್ತೊಂದೆಡೆ ಸಾವಿರಾರು ಯುವಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು! ಇದು ಬಿಜೆಪಿ ಸರ್ಕಾರದ ಉತ್ತಮ ಆಡಳಿತ. ಒಳ್ಳೆಯ ವಿಷಯವೆಂದರೆ ನೈಬ್ ಸಿಂಗ್ ಸೈನಿ ಜಿ ಅವರ ಸರ್ಕಾರವು ಮುಂಬರುವ ವರ್ಷಗಳಲ್ಲಿ ಸಾವಿರಾರು ಹೊಸ ಉದ್ಯೋಗಗಳಿಗೆ ಮಾರ್ಗಸೂಚಿ ರೂಪಿಸುವ ಕೆಲಸ ಮಾಡುತ್ತಿದೆ.
ಸ್ನೇಹಿತರೆ,
ಹರಿಯಾಣದ ಹೆಚ್ಚಿನ ಸಂಖ್ಯೆಯ ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆ ಸಲ್ಲಿಸುವ ರಾಜ್ಯವಾಗಿದೆ. ಕಾಂಗ್ರೆಸ್ ದಶಕಗಳಿಂದ ಒಂದು ಶ್ರೇಣಿ ಒಂದು ಪಿಂಚಣಿ ವಿಷಯದಲ್ಲಿ ಮೋಸ ಮಾಡಿದೆ. ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಇಲ್ಲಿಯವರೆಗೆ, ಹರಿಯಾಣದ ಮಾಜಿ ಸೈನಿಕರಿಗೆ ಒಂದು ಶ್ರೇಣಿ ಒಂದು ಪಿಂಚಣಿ ಅಡಿ, 13,500 ಕೋಟಿ ರೂ. ನೀಡಲಾಗಿದೆ. ಈ ಯೋಜನೆ ಕುರಿತು ಸುಳ್ಳು ಹೇಳುವ ಮೂಲಕ, ಕಾಂಗ್ರೆಸ್ ಸರ್ಕಾರವು ಇಡೀ ದೇಶದ ಸೈನಿಕರಿಗೆ ಕೇವಲ 500 ಕೋಟಿ ರೂ. ಒದಗಿಸಿತ್ತು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಈಗ ನೀವೇ ಯೋಚಿಸುತ್ತೀರಿ, ಇಡೀ ಹರಿಯಾಣದಲ್ಲಿ, 13 ಸಾವಿರದ 500 ಕೋಟಿ ಎಲ್ಲಿ, ಬರೀ 500 ಕೋಟಿ ಎಲ್ಲಿ? ಇದು ಎಂತಹ ಕಣ್ಣಿಗೆ ಕಟ್ಟುವ ಕೆಲಸವಾಗಿತ್ತು. ಕಾಂಗ್ರೆಸ್ ಯಾರಿಗೂ ಸಂಬಂಧಿಸಿಲ್ಲ, ಅದು ಅಧಿಕಾರಕ್ಕೆ ಮಾತ್ರ ಸಂಬಂಧಿಸಿದೆ. ಇದು ದಲಿತರಿಗೆ ಸಂಬಂಧಿಸಿಲ್ಲ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿಲ್ಲ, ಅಥವಾ ನನ್ನ ದೇಶದ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳಿಗೆ ಸಂಬಂಧಿಸಿಲ್ಲ, ಅಥವಾ ನನ್ನ ಸೈನಿಕರಿಗೆ ಸಂಬಂಧಿಸಿಲ್ಲ.
ಸ್ನೇಹಿತರೆ,
ಹರಿಯಾಣವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪವನ್ನು ಬಲಪಡಿಸುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಕ್ರೀಡೆಯಾಗಲಿ ಅಥವಾ ಕೃಷಿಯಾಗಲಿ, ಹರಿಯಾಣದ ಮಣ್ಣಿನ ಸುಗಂಧವು ಪ್ರಪಂಚದಾದ್ಯಂತ ತನ್ನ ಸುಗಂಧವನ್ನು ಹರಡುತ್ತಲೇ ಇರುತ್ತದೆ. ಹರಿಯಾಣದ ನನ್ನ ಪುತ್ರರು ಮತ್ತು ಪುತ್ರಿಯರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಈ ಹೊಸ ವಿಮಾನ ನಿಲ್ದಾಣ, ಈ ಹೊಸ ವಿಮಾನವು ಹರಿಯಾಣದ ಕನಸುಗಳನ್ನು ನನಸಾಗಿಸಲು ಸ್ಫೂರ್ತಿಯಾಗಲಿದೆ, ನೀವೆಲ್ಲರೂ ತಮ್ಮ ಆಶೀರ್ವಾದ ನೀಡಲು ಇಷ್ಟೊಂದು ಸಂಖ್ಯೆಯಲ್ಲಿ ಬಂದಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರಿಗೂ ನಾನು ತಲೆ ಬಾಗಿ ನಮಿಸುತ್ತೇನೆ. ನಿಮಗೆ ಅನೇಕ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತೇನೆ ಮತ್ತು ನಿಮ್ಮನ್ನು ಅಭಿನಂದಿಸುತ್ತೇನೆ! ನನ್ನೊಂದಿಗೆ ಹೇಳಿ,
ಭಾರತ್ ಮಾತಾ ಕಿ ಜೈ!ಭಾರತ್ ಮಾತಾ ಕಿ ಜೈ!ಭಾರತ್ ಮಾತಾ ಕಿ ಜೈ!
ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
The inauguration of Hisar Airport marks a significant milestone in Haryana's development journey. It will boost regional connectivity and catalyse economic growth across the state. https://t.co/8DtkTWUEXD
— Narendra Modi (@narendramodi) April 14, 2025
आज का दिन हम सभी के लिए, पूरे देश के लिए बहुत महत्वपूर्ण है।
— PMO India (@PMOIndia) April 14, 2025
आज संविधान निर्माता बाबा साहेब अंबेडकर की जयंती है: PM @narendramodi pic.twitter.com/J9LZZ7ZGxl
आज हरियाणा से अयोध्या धाम के लिए फ्लाइट शुरु हुई है।
— PMO India (@PMOIndia) April 14, 2025
यानि अब श्री कृष्ण जी की पावन भूमि हरियाणा, प्रभु राम की नगरी से सीधे जुड़ गई है: PM @narendramodi pic.twitter.com/ZiHlJxdqME
हमारी सरकार एक तरफ कनेक्टिविटी पर बल दे रही है... दूसरी तरफ गरीब कल्याण और सामाजिक न्याय भी सुनिश्चित कर रही है: PM @narendramodi pic.twitter.com/EDDoAMQ5B5
— PMO India (@PMOIndia) April 14, 2025
Raksha Mantri Shri @rajnathsingh writes that Babasaheb was one of modern India's greatest thinkers and institution-builders. He recalls Dr. Ambedkar's role in establishing key institutions and calls upon citizens to reaffirm their commitment to his ideals in building a Viksit… https://t.co/VpgWVchCcR
— PMO India (@PMOIndia) April 14, 2025
आज हिसार से अयोध्या धाम के लिए हवाई सेवा शुरू हुई है, साथ ही हिसार एयरपोर्ट की नई टर्मिनल बिल्डिंग का शिलान्यास भी हुआ है। मुझे पूरा विश्वास है कि ये एयरपोर्ट हरियाणा के नौजवानों के सपनों को नई उड़ान देगा। pic.twitter.com/gOLaJjmiGu
— Narendra Modi (@narendramodi) April 14, 2025
हमारी सरकार बाबासाहेब की आकांक्षाओं के अनुरूप गरीब कल्याण और सामाजिक न्याय सुनिश्चित कर रही है, वहीं कांग्रेस ने उनके विचार और उनकी पहचान को हमेशा के लिए खत्म करने का प्रयास किया। pic.twitter.com/LJgq5cNeyi
— Narendra Modi (@narendramodi) April 14, 2025
बाबासाहेब का सपना था कि हर गरीब और वंचित पूरी गरिमा के साथ अपना जीवन जी सके। लेकिन कांग्रेस ने हमारे एससी, एसटी और ओबीसी भाई-बहनों के घर पानी पहुंचाने तक की चिंता नहीं की। pic.twitter.com/CGeOXaD0e2
— Narendra Modi (@narendramodi) April 14, 2025
कांग्रेस ने राजनीतिक खेल खेलने के लिए बाबासाहेब के सपनों और सामाजिक न्याय के लिए संविधान में की गई व्यवस्था को तुष्टिकरण का माध्यम बनाकर रख दिया। pic.twitter.com/loKfR4elmZ
— Narendra Modi (@narendramodi) April 14, 2025
हमारी सरकार ने बाबासाहेब की प्रेरणा को आने वाली पीढ़ियों तक पहुंचाने के लिए अनेक कदम उठाए हैं। लेकिन संविधान के नाम पर राजनीतिक रोटी सेंकने वालों ने उनसे जुड़े पवित्र स्थानों का ना सिर्फ अपमान किया, बल्कि इतिहास से मिटाने का प्रयास भी किया। pic.twitter.com/slDi0qGyRQ
— Narendra Modi (@narendramodi) April 14, 2025