ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಅಯ್ಯ ವೈಕುಂಡ ಸ್ವಾಮಿಕಲ್ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಪ್ರಧಾನ ಮಂತ್ರಿಗಳು:
“ಶ್ರೀ ಅಯ್ಯ ವೈಕುಂಡ ಸ್ವಾಮಿಕಲ್ ಜನ್ಮಜಯಂತಿಯಂದು ಅವರಿಗೆ ನಮನಗಳು. ಅವರು ಇತರರ ಸೇವೆಗೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಮತ್ತು ನ್ಯಾಯಯುತವಾದ ಸಮಾಜವನ್ನು ಪೋಷಿಸಲು ತಮ್ಮನ್ನು ಅರ್ಪಿಸಿಕೊಂಡಿದ್ದರು. ದೀನದಲಿತರನ್ನು ಸಬಲೀಕರಣಗೊಳಿಸಲು ಹಲವಾರು ಪ್ರಯತ್ನಗಳನ್ನು ಕೈಗೊಂಡರು. ಅವರ ಆಲೋಚನೆಗಳು ಇಂದಿನ ಮತ್ತು ಮುಂದಿನ ಪೀಳಿಗೆಯ ಜನರನ್ನು ಪ್ರೇರೇಪಿಸುತ್ತವೆ.” ಎಂದು ಬರೆದಿದ್ದಾರೆ.
***
Tributes to Sri Ayya Vaikunda Swamikal on his birth anniversary. He devoted himself to serving others and nurturing a society that is inclusive and just. He undertook numerous efforts to empower the downtrodden as well. His thoughts keep inspiring people across generations.
— Narendra Modi (@narendramodi) March 12, 2023