ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸ್ಮರಣಾರ್ಥ, ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ ನಡೆದ ವಿಕಸಿತ ಭಾರತ ಯುವ ನಾಯಕರ ಸಂವಾದ 2025ರಲ್ಲಿ ಭಾಗವಹಿಸಿದರು. ಅವರು ಭಾರತದಾದ್ಯಂತ 3,000 ಕ್ರಿಯಾತ್ಮಕ ಯುವ ನಾಯಕರೊಂದಿಗೆ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಮಂಟಪಕ್ಕೆ ಜೀವ ಮತ್ತು ಶಕ್ತಿಯನ್ನು ತಂದ ಭಾರತದ ಯುವಜನರ ರೋಮಾಂಚಕ ಶಕ್ತಿಯನ್ನು ಎತ್ತಿ ತೋರಿಸಿದರು. ದೇಶದ ಯುವಜನರ ಮೇಲೆ ಅಪಾರ ನಂಬಿಕೆ ಹೊಂದಿದ್ದ ಸ್ವಾಮಿ ವಿವೇಕಾನಂದರನ್ನು ಇಡೀ ದೇಶ ಸ್ಮರಿಸುತ್ತಿದೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು. ಸ್ವಾಮಿ ವಿವೇಕಾನಂದರು ತಮ್ಮ ಶಿಷ್ಯರು ಯುವ ಪೀಳಿಗೆಯಿಂದ ಬರುತ್ತಾರೆ ಎಂದು ನಂಬಿದ್ದರು, ಅವರು ಸಿಂಹಗಳಂತೆ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ಅವರು ಭಾವಿಸಿದ್ದರು. ಸ್ವಾಮೀಜಿ ಯುವಜನರನ್ನು ನಂಬಿದ್ದಂತೆ ಸ್ವಾಮೀಜಿ ಮತ್ತು ಅವರ ನಂಬಿಕೆಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಪ್ರಧಾನ ಮಂತ್ರಿ ಹೇಳಿದರು. ವಿಶೇಷವಾಗಿ ಯುವಜನರ ಬಗ್ಗೆ ಅವರ ದೃಷ್ಟಿಕೋನದ ಬಗ್ಗೆ ತಾವು ಅವರನ್ನು ಸಂಪೂರ್ಣವಾಗಿ ನಂಬುವುದಾಗಿ ಹೇಳಿದರು. ಸ್ವಾಮಿ ವಿವೇಕಾನಂದರು ಇಂದು ನಮ್ಮ ನಡುವೆ ಇದ್ದಿದ್ದರೆ, 21ನೇ ಶತಮಾನದ ಯುವಜನರ ಜಾಗೃತ ಶಕ್ತಿ ಮತ್ತು ಸಕ್ರಿಯ ಪ್ರಯತ್ನಗಳನ್ನು ನೋಡಿ ಅವರಲ್ಲಿ ಹೊಸ ಆತ್ಮವಿಶ್ವಾಸ ತುಂಬುತ್ತಿತ್ತು ಎಂದು ಪ್ರಧಾನಿ ಒತ್ತಿ ಹೇಳಿದರು.
ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ ಜಿ-20 ಕಾರ್ಯಕ್ರಮವನ್ನು ಸ್ಮರಿಸಿದ ಶ್ರೀ ಮೋದಿ, ವಿಶ್ವದ ಭವಿಷ್ಯದ ಬಗ್ಗೆ ಚರ್ಚಿಸಲು ವಿಶ್ವ ನಾಯಕರು ಒಂದೇ ಸ್ಥಳದಲ್ಲಿದ್ದರು, ಆದರೆ ಇಂದು ಭಾರತದ ಯುವಜನರು ಭಾರತದ ಮುಂದಿನ 25 ವರ್ಷಗಳ ಮಾರ್ಗಸೂಚಿಯನ್ನು ರೂಪಿಸುತ್ತಿದ್ದಾರೆ ಎಂದರು. ಕೆಲವು ತಿಂಗಳ ಹಿಂದೆ ತಮ್ಮ ನಿವಾಸದಲ್ಲಿ ಯುವ ಕ್ರೀಡಾಪಟುಗಳನ್ನು ಭೇಟಿಯಾದ ಬಗ್ಗೆ ಒಂದು ಸಂಗತಿಯನ್ನು ಹಂಚಿಕೊಂಡ ಅವರು, “ಜಗತ್ತಿಗೆ, ನೀವು ಪ್ರಧಾನಿಯಾಗಿರಬಹುದು, ಆದರೆ ನಮಗೆ ನೀವು ಪರಮ ಮಿತ್ರ” ಎಂದು ಒಬ್ಬ ಕ್ರೀಡಾಪಟು ಹೇಳಿದ್ದನ್ನು ಎತ್ತಿ ತೋರಿಸಿದರು. ಭಾರತದ ಯುವಜನರೊಂದಿಗಿನ ತಮ್ಮ ಸ್ನೇಹದ ಬಂಧವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸ್ನೇಹದ ಬಲವಾದ ಕೊಂಡಿ ನಂಬಿಕೆ ಎಂದು ಹೇಳಿದರು. ಯುವಜನರ ಮೇಲೆ ತಾವು ಅಪಾರ ನಂಬಿಕೆಯನ್ನು ಹೊಂದಿರುವುದಾಗಿಯೂ ಅವರು ನುಡಿದರು, ಇದು ಮೈ ಭಾರತ್ ರಚನೆಗೆ ಪ್ರೇರಣೆ ನೀಡಿತು ಮತ್ತು ವಿಕಸಿತ ಭಾರತ ಯುವ ನಾಯಕರ ಸಂವಾದಕ್ಕೆ ಅಡಿಪಾಯವನ್ನು ಹಾಕಿತು ಎಂದವರು ವಿವರಿಸಿದರು. ಭಾರತದ ಯುವಜನರ ಸಾಮರ್ಥ್ಯವು ಶೀಘ್ರದಲ್ಲೇ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿದೆ ಎಂದು ಪ್ರಧಾನಿ ಹೇಳಿದರು. ಗುರಿ ಮಹತ್ವದ್ದಾಗಿದ್ದರೂ, ಅದು ಅಸಾಧ್ಯವಲ್ಲ ಎಂದರು. ಅವರು ಒಪ್ಪಿಕೊಂಡರು. ಇದರ ಬಗ್ಗೆ ನಕಾರಾತ್ಮಕವಾಗಿ ಚಿಂತಿಸುವವರ ಅಭಿಪ್ರಾಯಗಳನ್ನು ದೂರ ಮಾಡಿದ ಪ್ರಧಾನ ಮಂತ್ರಿ ಅವರು ಲಕ್ಷಾಂತರ ಯುವಜನರ ಸಾಮೂಹಿಕ ಪ್ರಯತ್ನದಿಂದ ಪ್ರಗತಿಯ ಚಕ್ರಗಳನ್ನು ಮುನ್ನಡೆಸುತ್ತಿದ್ದೇವೆ, ರಾಷ್ಟ್ರವು ನಿಸ್ಸಂದೇಹವಾಗಿ ತನ್ನ ಗುರಿಯನ್ನು ತಲುಪಲಿದೆ ಎಂದೂ ಹೇಳಿದರು.
“ಇತಿಹಾಸವು ನಮಗೆ ಪಾಠ ಕಲಿಸುತ್ತದೆ ಮತ್ತು ಪ್ರೇರೇಪಿಸುತ್ತದೆ” ಎಂಬುದನ್ನು ಶ್ರೀ ಮೋದಿ ಉಲ್ಲೇಖಿಸಿದರಲ್ಲದೆ ರಾಷ್ಟ್ರಗಳು ಮತ್ತು ಗುಂಪುಗಳು ದೊಡ್ಡ ಕನಸುಗಳು ಮತ್ತು ಸಂಕಲ್ಪಗಳೊಂದಿಗೆ ತಮ್ಮ ಗುರಿಗಳನ್ನು ಸಾಧಿಸಿದ ಹಲವಾರು ಜಾಗತಿಕ ಉದಾಹರಣೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. . ಯುಎಸ್ಎಯಲ್ಲಿ 1930 ರ ಆರ್ಥಿಕ ಬಿಕ್ಕಟ್ಟಿನ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಅಮೆರಿಕನ್ನರು ಹೊಸ ಒಪ್ಪಂದವನ್ನು ಆರಿಸಿಕೊಂಡರು ಮತ್ತು ಬಿಕ್ಕಟ್ಟನ್ನು ಜಯಿಸಿದ್ದಲ್ಲದೆ ಅವರ ಅಭಿವೃದ್ಧಿಯನ್ನು ವೇಗಗೊಳಿಸಿದರು ಎಂದು ಹೇಳಿದರು. ಮೂಲಭೂತ ಜೀವನದ ಬಿಕ್ಕಟ್ಟುಗಳನ್ನು ಎದುರಿಸಿದ, ಆದರೆ ಶಿಸ್ತು ಮತ್ತು ಸಾಮೂಹಿಕ ಪ್ರಯತ್ನದ ಮೂಲಕ ಜಾಗತಿಕ ಹಣಕಾಸು ಮತ್ತು ವ್ಯಾಪಾರ ಕೇಂದ್ರವಾಗಿ ರೂಪಾಂತರಗೊಂಡ ಸಿಂಗಾಪುರವನ್ನು ಅವರು ಉಲ್ಲೇಖಿಸಿದರು. ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರದ ಆಹಾರ ಬಿಕ್ಕಟ್ಟನ್ನು ನಿವಾರಿಸಿದಂತಹ ಉದಾಹರಣೆಗಳು ಭಾರತದಲ್ಲಿವೆ ಎಂದು ಪ್ರಧಾನಿ ಹೇಳಿದರು. ದೊಡ್ಡ ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಕಾಲಮಿತಿಯೊಳಗೆ ಸಾಧಿಸುವುದು ಅಸಾಧ್ಯವಲ್ಲ ಎಂದು ಅವರು ಒತ್ತಿ ಹೇಳಿದರು. ಸ್ಪಷ್ಟ ಗುರಿಯಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಮತ್ತು ಇಂದಿನ ಭಾರತವು ಈ ಮನಸ್ಥಿತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಕಳೆದ ದಶಕದಲ್ಲಿ ಸಂಕಲ್ಪದ ಮೂಲಕ ಗುರಿಗಳನ್ನು ಸಾಧಿಸಿದ ಹಲವಾರು ಉದಾಹರಣೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಬಯಲು ಬಹಿರ್ದೆಸೆ ಮುಕ್ತವಾಗಲು ಸಂಕಲ್ಪ ಮಾಡಿದೆ ಮತ್ತು 60 ತಿಂಗಳಲ್ಲಿ 60 ಕೋಟಿ ನಾಗರಿಕರು ಈ ಗುರಿಯನ್ನು ಸಾಧಿಸಿದ್ದಾರೆ ಎಂದರು. ಭಾರತದ ಪ್ರತಿಯೊಂದು ಕುಟುಂಬವೂ ಈಗ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ಹೊಂದಿದೆ ಮತ್ತು ಮಹಿಳೆಯರ ಅಡುಗೆಮನೆಗಳನ್ನು ಹೊಗೆಯಿಂದ ಮುಕ್ತಗೊಳಿಸಲು 100 ದಶಲಕ್ಷಕ್ಕೂ ಹೆಚ್ಚು ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ವಿವಿಧ ಕ್ಷೇತ್ರಗಳಲ್ಲಿ ಭಾರತವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತನ್ನ ಗುರಿಗಳನ್ನು ಸಾಧಿಸುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ, ಜಗತ್ತು ಲಸಿಕೆಗಳಿಗಾಗಿ ಹೆಣಗಾಡುತ್ತಿದ್ದಾಗ, ಭಾರತೀಯ ವಿಜ್ಞಾನಿಗಳು ಸಮಯಕ್ಕಿಂತ ಮುಂಚಿತವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು. ಭಾರತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡಲು 3-4 ವರ್ಷಗಳು ಬೇಕಾಗುತ್ತದೆ ಎಂಬ ಊಹನೆಗಳ ಹೊರತಾಗಿಯೂ, ದೇಶವು ದಾಖಲೆಯ ಸಮಯದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನವನ್ನು ನಡೆಸಿದೆ ಎಂದು ಅವರು ಹೇಳಿದರು. ಹಸಿರು ಇಂಧನಕ್ಕೆ ಭಾರತದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಿಗದಿತ ಸಮಯಕ್ಕಿಂತ ಒಂಬತ್ತು ವರ್ಷ ಮುಂಚಿತವಾಗಿ ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ಪೂರೈಸಿದ ಮೊದಲ ದೇಶ ಭಾರತ ಎಂದು ಹೇಳಿದರು. 2030 ರ ವೇಳೆಗೆ ಪೆಟ್ರೋಲಿನಲ್ಲಿ 20% ಎಥೆನಾಲ್ ಮಿಶ್ರಣದ ಗುರಿಯನ್ನು ಅವರು ಉಲ್ಲೇಖಿಸಿದರು, ಇದನ್ನು ಭಾರತವು ಗಡುವಿನ ಮೊದಲು ಸಾಧಿಸಲು ಸಜ್ಜಾಗಿದೆ. ಈ ಪ್ರತಿಯೊಂದು ಯಶಸ್ಸುಗಳು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಗೆ ಹತ್ತಿರ ತರುತ್ತವೆ ಎಂದು ಅವರು ಹೇಳಿದರು.
“ದೊಡ್ಡ ಗುರಿಗಳನ್ನು ಸಾಧಿಸುವುದು ಕೇವಲ ಸರ್ಕಾರಿ ಯಂತ್ರದ ಜವಾಬ್ದಾರಿಯಲ್ಲ, ಇದಕ್ಕೆ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಪ್ರಯತ್ನದ ಅಗತ್ಯವಿದೆ” ಎಂದು ಶ್ರೀ ಮೋದಿ ಹೇಳಿದರು ಮತ್ತು ರಾಷ್ಟ್ರೀಯ ಉದ್ದೇಶಗಳನ್ನು ಸಾಧಿಸುವಲ್ಲಿ ಚರ್ಚೆ, ನಿರ್ದೇಶನ ಮತ್ತು ಮಾಲೀಕತ್ವದ ಮಹತ್ವವನ್ನು ಎತ್ತಿ ತೋರಿಸಿದರು. ರಸಪ್ರಶ್ನೆಗಳು, ಪ್ರಬಂಧ ಸ್ಪರ್ಧೆಗಳು ಮತ್ತು ಪ್ರಸ್ತುತಿಗಳಲ್ಲಿ ಭಾಗವಹಿಸಿದ ಯುವಜನರ ನೇತೃತ್ವದಲ್ಲಿ ನಡೆದ ವಿಕ್ಷಿತ್ ಭಾರತ್ ಯುವ ನಾಯಕರ ಸಂವಾದವು ಈ ಪ್ರಕ್ರಿಯೆಗೆ ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದರು. ಬಿಡುಗಡೆ ಮಾಡಿದ ಪ್ರಬಂಧ ಪುಸ್ತಕ ಮತ್ತು ಪರಿಶೀಲಿಸಿದ ಹತ್ತು ಪ್ರಸ್ತುತಿಗಳಲ್ಲಿ ಪ್ರತಿಬಿಂಬಿತವಾದಂತೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯ ಮಾಲೀಕತ್ವಕ್ಕಾಗಿ ಅವರು ಯುವಜನರನ್ನು ಶ್ಲಾಘಿಸಿದರು. ಯುವಜನರ ಪರಿಹಾರಗಳು ವಾಸ್ತವ ಮತ್ತು ಅನುಭವದ ಮೇಲೆ ಆಧಾರಿತವಾಗಿವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಇದು ರಾಷ್ಟ್ರ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವರ ವಿಶಾಲ ತಿಳುವಳಿಕೆಯನ್ನು ಪ್ರದರ್ಶಿಸುತ್ತದೆ ಎಂದರು. ಯುವಜನರ ವಿಸ್ತೃತ ಚಿಂತನೆ ಮತ್ತು ತಜ್ಞರು, ಸಚಿವರು ಮತ್ತು ನೀತಿ ನಿರೂಪಕರೊಂದಿಗಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಅವರು ಯುವಜನರನ್ನು ಶ್ಲಾಘಿಸಿದರು. ಯುವ ನಾಯಕರ ಸಂವಾದದ ವಿಚಾರಗಳು ಮತ್ತು ಸಲಹೆಗಳು ಈಗ ರಾಷ್ಟ್ರೀಯ ನೀತಿಗಳ ಭಾಗವಾಗಲಿದ್ದು, ದೇಶದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಪ್ರಧಾನಿ ಘೋಷಿಸಿದರು. ಅವರು ಯುವಜನರನ್ನು ಅಭಿನಂದಿಸಿದರು ಮತ್ತು ಒಂದು ಲಕ್ಷ ಹೊಸ ಯುವಜನರನ್ನು ರಾಜಕೀಯಕ್ಕೆ ತರುವ ಬದ್ಧತೆಯನ್ನು ಪುನರುಚ್ಚರಿಸಿದರು, ಸಲಹೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆಯೂ ಯುವಜನರನ್ನು ಪ್ರೋತ್ಸಾಹಿಸಿದರು.
ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ತಮ್ಮ ಚಿಂತನೆಯನ್ನು/ದೃಷ್ಟಿಕೋನವನ್ನು ಹಂಚಿಕೊಂಡ ಮತ್ತು ಅದರ ಆರ್ಥಿಕ, ಕಾರ್ಯತಂತ್ರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅಭಿವೃದ್ಧಿ ಹೊಂದಿದ ಭಾರತದಲ್ಲಿ ಆರ್ಥಿಕತೆ ಮತ್ತು ಪರಿಸರ ಎರಡೂ ಅಭಿವೃದ್ಧಿ ಹೊಂದುತ್ತವೆ, ಉತ್ತಮ ಶಿಕ್ಷಣ ಮತ್ತು ಆದಾಯಕ್ಕೆ ಹಲವಾರು ಅವಕಾಶಗಳು ಒದಗುತ್ತವೆ ಎಂದರು. ಭಾರತವು ವಿಶ್ವದ ಅತಿದೊಡ್ಡ ನುರಿತ ಕೌಶಲ್ಯಯುಕ್ತ ಯುವ ಕಾರ್ಯಪಡೆಯನ್ನು ಹೊಂದಿರುತ್ತದೆ, ಇದು ಅವರ ಕನಸುಗಳಿಗೆ ಮುಕ್ತ ಆಕಾಶವನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಗುರಿಯನ್ನು ಸಾಧಿಸಲು ಪ್ರತಿಯೊಂದು ನಿರ್ಧಾರ, ಹೆಜ್ಜೆ ಮತ್ತು ನೀತಿಯನ್ನು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನದೊಂದಿಗೆ ಹೊಂದಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಮುಂಬರುವ ದಶಕಗಳಲ್ಲಿ ದೇಶವು ಅತ್ಯಂತ ಕಿರಿಯ ರಾಷ್ಟ್ರವಾಗಿ ಉಳಿಯುವುದರಿಂದ ಇದು ಭಾರತದ ದೊಡ್ಡ ಜಿಗಿತದ ಕ್ಷಣವಾಗಿದೆ ಎಂದು ಅವರು ಒತ್ತಿ ಹೇಳಿದರು. “ಭಾರತದ ಜಿಡಿಪಿಯನ್ನು ಗಮನಾರ್ಹವಾಗಿ ಹೆಚ್ಚಿಸುವ ಯುವಜನರ ಸಾಮರ್ಥ್ಯವನ್ನು ಜಾಗತಿಕ ಏಜೆನ್ಸಿಗಳು ಗುರುತಿಸಿವೆ” ಎಂದು ಶ್ರೀ ಮೋದಿ ಹೇಳಿದರು. ಯುವಜನರ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದ ಮಹರ್ಷಿ ಅರಬಿಂದೋ, ಗುರುದೇವ್ ಠಾಗೋರ್ ಮತ್ತು ಹೋಮಿ ಜೆ. ಭಾಭಾ ಅವರಂತಹ ಮಹಾನ್ ಚಿಂತಕರನ್ನು ಉಲ್ಲೇಖಿಸಿದ ಶ್ರೀ ಮೋದಿ, ಭಾರತೀಯ ಯುವಜನರು ಪ್ರಮುಖ ಜಾಗತಿಕ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ, ವಿಶ್ವಾದ್ಯಂತ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ ಎಂದರು. ಮುಂದಿನ 25 ವರ್ಷಗಳ ‘ಅಮೃತ ಕಾಲ’ ನಿರ್ಣಾಯಕ ಎಂದು ಒತ್ತಿ ಹೇಳಿದ ಪ್ರಧಾನಿ, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಯುವಜನರು ನನಸು ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನವೋದ್ಯಮ (ಸ್ಟಾರ್ಟ್ಅಪ್) ಜಗತ್ತಿನಲ್ಲಿ ಭಾರತವನ್ನು ಅಗ್ರ ಮೂರು ಸ್ಥಾನಗಳಿಗೆ ತರುವಲ್ಲಿ, ಉತ್ಪಾದನೆಯನ್ನು ಮುನ್ನಡೆಸುವಲ್ಲಿ, ಡಿಜಿಟಲ್ ಇಂಡಿಯಾವನ್ನು ಜಾಗತಿಕವಾಗಿ ಉನ್ನತೀಕರಿಸುವಲ್ಲಿ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ಯುವಜನರ ಸಾಧನೆಗಳನ್ನು ಅವರು ಎತ್ತಿ ತೋರಿಸಿದರು. ಭಾರತೀಯ ಯುವಜನರು ಅಸಾಧ್ಯವಾದುದನ್ನು ಸಾಧ್ಯವಾಗಿಸಿದಾಗ, ಅಭಿವೃದ್ಧಿ ಹೊಂದಿದ ಭಾರತವನ್ನು ನಿಸ್ಸಂದೇಹವಾಗಿ ಸಾಧಿಸಬಹುದು ಎಂದೂ ಅವರು ದೃಢವಾಗಿ ಹೇಳಿದರು.
ಇಂದಿನ ಯುವಜನರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಶ್ರೀ ಮೋದಿ, ಭಾರತದಲ್ಲಿ ಪ್ರತಿ ವಾರ ಹೊಸ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ ಮತ್ತು ಪ್ರತಿದಿನ ಹೊಸ ಐಟಿಐ ಸ್ಥಾಪಿಸಲಾಗುತ್ತಿದೆ ಎಂದು ಒತ್ತಿ ಹೇಳಿದರು. ಹೆಚ್ಚುವರಿಯಾಗಿ, ಪ್ರತಿ ಮೂರು ದಿನಕ್ಕೊಂದರಂತೆ ಅಟಲ್ ಟಿಂಕರಿಂಗ್ ಲ್ಯಾಬ್ ತೆರೆಯಲಾಗುತ್ತಿದೆ ಮತ್ತು ಪ್ರತಿದಿನ ಎರಡು ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಭಾರತವು ಈಗ 23 ಐಐಟಿಗಳನ್ನು ಹೊಂದಿದೆ ಮತ್ತು ಕಳೆದ ದಶಕದಲ್ಲಿ ಐಐಐಟಿಗಳ ಸಂಖ್ಯೆ 9 ರಿಂದ 25 ಕ್ಕೆ ಮತ್ತು ಐಐಎಂಗಳ ಸಂಖ್ಯೆ 13 ರಿಂದ 21 ಕ್ಕೆ ಏರಿದೆ ಎಂದೂ ಪ್ರಧಾನಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಏಮ್ಸ್ ಗಳ (ಎ.ಐ.ಐ.ಎಂ.ಎಸ್.)ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ ಹಾಗು ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅವರು ಉಲ್ಲೇಖಿಸಿದರು. ಭಾರತದ ಶಿಕ್ಷಣ ಸಂಸ್ಥೆಗಳು ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಅತ್ಯುತ್ತಮ ಫಲಿತಾಂಶಗಳನ್ನು ತೋರಿಸುತ್ತಿವೆ, ಕ್ಯೂಎಸ್ ಶ್ರೇಯಾಂಕದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ 2014 ರಲ್ಲಿ ಒಂಬತ್ತು ಇದ್ದದ್ದು ಇಂದು ನಲವತ್ತಾರಕ್ಕೆ ಏರಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಶಿಕ್ಷಣ ಸಂಸ್ಥೆಗಳ ಹೆಚ್ಚುತ್ತಿರುವ ಬಲವು ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಹತ್ವದ ಅಡಿಪಾಯವಾಗಿದೆ ಎಂದು ಅವರು ಒತ್ತಿ ಹೇಳಿದರು.
“2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧನೆಗೆ ದೈನಂದಿನ ಗುರಿಗಳು ಮತ್ತು ನಿರಂತರ ಪ್ರಯತ್ನಗಳು ಬೇಕಾಗುತ್ತವೆ” ಎಂದು ಪ್ರಧಾನಿ ನುಡಿದರು. ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ದಶಕದಲ್ಲಿ, 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ ಮತ್ತು ಇಡೀ ದೇಶವು ಶೀಘ್ರದಲ್ಲೇ ಬಡತನ ಮುಕ್ತವಾಗಲಿದೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಈ ದಶಕದ ಅಂತ್ಯದ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದುವ ಮತ್ತು 2030ರ ವೇಳೆಗೆ ರೈಲ್ವೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಭಾರತದ ಗುರಿಯನ್ನು ಅವರು ಎತ್ತಿ ತೋರಿಸಿದರು.
ಮುಂದಿನ ದಶಕದಲ್ಲಿ ಒಲಿಂಪಿಕ್ಸ್ ಆತಿಥ್ಯ ವಹಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ, ಇದನ್ನು ಸಾಧಿಸಲು ರಾಷ್ಟ್ರದ ಸಮರ್ಪಣೆಯ ಅಗತ್ಯವನ್ನು ಒತ್ತಿ ಹೇಳಿದರಲ್ಲದೆ, 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಯೋಜನೆಯೊಂದಿಗೆ ಭಾರತವು ಬಾಹ್ಯಾಕಾಶ ಶಕ್ತಿಯಾಗಿ ವೇಗವಾಗಿ ದಾಪುಗಾಲು ಹಾಕುತ್ತಿದೆ ಎಂದರು. ಚಂದ್ರಯಾನದ ಯಶಸ್ಸು ಮತ್ತು ಚಂದ್ರನ ಮೇಲೆ ಭಾರತೀಯರನ್ನು ಇಳಿಸುವ ಅಂತಿಮ ಗುರಿಯೊಂದಿಗೆ ಗಗನಯಾನಕ್ಕಾಗಿ ನಡೆಯುತ್ತಿರುವ ಸಿದ್ಧತೆಗಳನ್ನು ಅವರು ಉಲ್ಲೇಖಿಸಿದರು. ಇಂತಹ ಗುರಿಗಳನ್ನು ಸಾಧಿಸುವುದು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಒತ್ತಿ ಹೇಳಿದರು.
ದೈನಂದಿನ ಜೀವನದ ಮೇಲೆ ಆರ್ಥಿಕ ಬೆಳವಣಿಗೆಯ ಪರಿಣಾಮವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಆರ್ಥಿಕತೆಯು ಬೆಳೆದಂತೆ, ಅದು ಜೀವನದ ಎಲ್ಲಾ ಅಂಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಈ ಶತಮಾನದ ಮೊದಲ ದಶಕದಲ್ಲಿ ಭಾರತವು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಯಿತು, ಆದರೆ ಸಣ್ಣ ಆರ್ಥಿಕ ಗಾತ್ರದೊಂದಿಗೆ, ಕೃಷಿ ಬಜೆಟ್ ಕೇವಲ ಕೆಲವು ಸಾವಿರ ಕೋಟಿಗಳಷ್ಟಿತ್ತು ಮತ್ತು ಮೂಲಸೌಕರ್ಯ ಬಜೆಟ್ ಒಂದು ಲಕ್ಷ ಕೋಟಿಗಿಂತ ಕಡಿಮೆ ಇತ್ತು ಎಂದು ಅವರು ನೆನಪಿಸಿಕೊಂಡರು. ಆ ಸಮಯದಲ್ಲಿ, ಹೆಚ್ಚಿನ ಹಳ್ಳಿಗಳಿಗೆ ಸರಿಯಾದ ರಸ್ತೆಗಳಿರಲಿಲ್ಲ, ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆಗಳ ಸ್ಥಿತಿ ಕಳಪೆಯಾಗಿತ್ತು. ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳು ದೇಶದ ಹೆಚ್ಚಿನ ಭಾಗಕ್ಕೆ ಲಭ್ಯವಿಲ್ಲದಂತಾಗಿತ್ತು ಎಂದು ಹೇಳಿದರು. ಎರಡು ಟ್ರಿಲಿಯನ್ ಡಾಲರ್ ಆರ್ಥಿಕತೆಯಾದ ನಂತರ, ಭಾರತದ ಮೂಲಸೌಕರ್ಯ ಬಜೆಟ್ ಎರಡು ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಯಾಗಿತ್ತು ಎಂದೂ ಶ್ರೀ ಮೋದಿ ಹೇಳಿದರು. ಆದಾಗ್ಯೂ, ದೇಶವು ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಕಾಲುವೆಗಳು, ಬಡವರಿಗೆ ವಸತಿ, ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಕಂಡಿತು. ಭಾರತವು ವೇಗವಾಗಿ ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುತ್ತಿದ್ದಂತೆ, ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ, ವಂದೇ ಭಾರತ್ ನಂತಹ ಆಧುನಿಕ ರೈಲುಗಳನ್ನು ಪರಿಚಯಿಸಲಾಯಿತು ಮತ್ತು ಬುಲೆಟ್ ರೈಲಿನ ಕನಸು ನನಸಾಗಲು ಪ್ರಾರಂಭಿಸಿತು ಎಂದು ಅವರು ಹೇಳಿದರು. ಭಾರತವು ಜಾಗತಿಕವಾಗಿ ವೇಗವಾಗಿ 5 ಜಿ ಬಿಡುಗಡೆಯನ್ನು ಸಾಧಿಸಿದೆ, ಸಾವಿರಾರು ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ಬ್ಯಾಂಡ್ ಇಂಟರ್ನೆಟ್ ವಿಸ್ತರಿಸಿದೆ ಮತ್ತು 300,000 ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. ಯುವಜನರಿಗೆ ಮೇಲಾಧಾರ ರಹಿತ ಮುದ್ರಾ ಸಾಲಗಳಲ್ಲಿ 23 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಮತ್ತು ವಿಶ್ವದ ಅತಿದೊಡ್ಡ ಉಚಿತ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಅನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಇದಲ್ಲದೆ, ವಾರ್ಷಿಕವಾಗಿ ಸಾವಿರಾರು ಕೋಟಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಮತ್ತು ಬಡವರಿಗಾಗಿ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಆರ್ಥಿಕತೆ ಬೆಳೆದಂತೆ, ಅಭಿವೃದ್ಧಿ ಚಟುವಟಿಕೆಗಳು ವೇಗಗೊಂಡವು, ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿದವು ಮತ್ತು ಪ್ರತಿಯೊಂದು ವಲಯ ಹಾಗು ಸಾಮಾಜಿಕ ವರ್ಗದ ಮೇಲೆ ಖರ್ಚು ಮಾಡುವ ರಾಷ್ಟ್ರದ ಸಾಮರ್ಥ್ಯವನ್ನು ಹೆಚ್ಚಿಸಿದವು ಎಂದು ಪ್ರಧಾನಿ ಒತ್ತಿ ಹೇಳಿದರು.
ಭಾರತವು ಈಗ ಸುಮಾರು ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದ್ದು, ಅದರ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಪ್ರಸ್ತುತ ಮೂಲಸೌಕರ್ಯ ಬಜೆಟ್ 11 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ, ಇದು ಒಂದು ದಶಕದ ಹಿಂದಿನದಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು ಮತ್ತು 2014 ರಲ್ಲಿದ್ದ ಸಂಪೂರ್ಣ ಮೂಲಸೌಕರ್ಯ ಬಜೆಟ್ ಗಿಂತ ಹೆಚ್ಚಿನ ಮೊತ್ತವನ್ನು ರೈಲ್ವೆಗೆ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು. ಭಾರತದ ಬದಲಾಗುತ್ತಿರುವ ಭೂದೃಶ್ಯದಲ್ಲಿ ಈ ಹೆಚ್ಚಿನ ಬಜೆಟ್ ನ ಪರಿಣಾಮ ಸ್ಪಷ್ಟವಾಗಿದೆ, ಜೊತೆಗೆ ಭಾರತ್ ಮಂಟಪವು ಒಂದು ಸುಂದರ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
“ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ವೇಗವಾಗಿ ಸಾಗುತ್ತಿದೆ, ಇದು ಅಭಿವೃದ್ಧಿ ಮತ್ತು ಸೌಲಭ್ಯಗಳನ್ನು ಬಹಳವಾಗಿ ವಿಸ್ತರಿಸುತ್ತದೆ” ಎಂದು ಶ್ರೀ ಮೋದಿ ಉದ್ಗರಿಸಿದರು. ಮುಂದಿನ ದಶಕದ ಅಂತ್ಯದ ವೇಳೆಗೆ ಭಾರತವು ಹತ್ತು ಟ್ರಿಲಿಯನ್ ಡಾಲರ್ ಗಡಿಯನ್ನು ದಾಟಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಆರ್ಥಿಕತೆ ಬೆಳೆದಂತೆ ಉದ್ಭವಿಸುವ ಹಲವಾರು ಅವಕಾಶಗಳ ಬಗ್ಗೆ ಅವರು ಯುವಜನರ ಗಮನ ಸೆಳೆದರು, ಅವರ ಪೀಳಿಗೆಯು ದೇಶದ ಇತಿಹಾಸದಲ್ಲಿ ಅತಿದೊಡ್ಡ ಪರಿವರ್ತನೆಯನ್ನು ಉಂಟುಮಾಡುವುದಲ್ಲದೆ ಅದರ ಅತಿದೊಡ್ಡ ಫಲಾನುಭವಿಗಳಾಗಲಿದೆ ಎಂದೂ ಪ್ರತಿಪಾದಿಸಿದರು. ಯುವ ನಾಯಕರ ಸಂವಾದದಲ್ಲಿ ಪಾಲ್ಗೊಂಡವರು ಪ್ರದರ್ಶಿಸಿದಂತೆ, ಆರಾಮ ವಲಯದಿಂದ ದೂರವಿರಲು, ಅಪಾಯಗಳನ್ನು ತೆಗೆದುಕೊಳ್ಳಲು ಮತ್ತು ತಮ್ಮದೇ ಆರಾಮ ವಲಯಗಳಿಂದ ಹೊರಬರುವಂತೆ ಪ್ರಧಾನಿ ಯುವಜನರಿಗೆ ಸಲಹೆ ನೀಡಿದರು. ಜೀವನದ ಈ ಮಂತ್ರವು ಅವರನ್ನು ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.
ಭಾರತದ ಭವಿಷ್ಯದ ಮಾರ್ಗಸೂಚಿಯನ್ನು ರೂಪಿಸುವಲ್ಲಿ ವಿಕ್ಷಿತ್ ಭಾರತ್ ಯುವ ನಾಯಕರ ಸಂವಾದದ ಮಹತ್ವದ ಪಾತ್ರವನ್ನು ಒತ್ತಿಹೇಳಿದ ಶ್ರೀ ಮೋದಿ, ಯುವಜನರು ಈ ನಿರ್ಣಯವನ್ನು ಶಕ್ತಿ, ಉತ್ಸಾಹ ಮತ್ತು ಸಮರ್ಪಣೆಯ ಭಾವದಿಂದ ಸ್ವೀಕರಿಸಿದ್ದನ್ನು ಶ್ಲಾಘಿಸಿದರು. ಅಭಿವೃದ್ಧಿ ಹೊಂದಿದ ಭಾರತದ ಕಲ್ಪನೆಗಳು ಅಮೂಲ್ಯ, ಅತ್ಯುತ್ತಮ ಮತ್ತು ಶ್ರೇಷ್ಠವಾಗಿವೆ ಎಂದು ಅವರು ಹೇಳಿದರು. ಈ ವಿಚಾರಗಳನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯುವಂತೆ, ಪ್ರತಿ ಜಿಲ್ಲೆ, ಗ್ರಾಮ ಮತ್ತು ನೆರೆಹೊರೆಯ ಇತರ ಯುವಜನರನ್ನು ಅಭಿವೃದ್ಧಿ ಹೊಂದಿದ ಭಾರತದ ಸ್ಫೂರ್ತಿಯೊಂದಿಗೆ ಸಂಪರ್ಕಿಸುವಂತೆ ಅವರು ಯುವಜನರನ್ನು ಒತ್ತಾಯಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಪ್ರತಿಯೊಬ್ಬರೂ ಈ ಸಂಕಲ್ಪಕ್ಕೆ ಬದ್ಧರಾಗಿ ಬದುಕಲು ಮತ್ತು ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಪ್ರೋತ್ಸಾಹಿಸಿದರು. ರಾಷ್ಟ್ರೀಯ ಯುವ ದಿನದಂದು ಭಾರತದ ಎಲ್ಲ ಯುವಜನರಿಗೆ ಅವರು ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ, ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಹಾಯಕ ಸಚಿವರಾದ ಶ್ರೀ ಜಯಂತ್ ಚೌಧರಿ ಮತ್ತು ಶ್ರೀಮತಿ ರಕ್ಷಾ ಖಾಡ್ಸೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ವಿಕಸಿತ ಭಾರತ ಯುವ ನಾಯಕರ ಸಂವಾದವು ರಾಷ್ಟ್ರೀಯ ಯುವ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸುವ 25 ವರ್ಷಗಳ ಸಂಪ್ರದಾಯವನ್ನು ಮುರಿಯುವ ಗುರಿಯನ್ನು ಹೊಂದಿದೆ. ಇದು ರಾಜಕೀಯ ಸಂಬಂಧಗಳಿಲ್ಲದ 1 ಲಕ್ಷ ಯುವಜನರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಮತ್ತು ವಿಕಸಿತ ಭಾರತಕ್ಕಾಗಿ ಅವರ ಆಲೋಚನೆಗಳನ್ನು ನನಸಾಗಿಸಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸಲು ಪ್ರಧಾನಿಯವರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾಡಿದ ಕರೆಯ ಜೊತೆ ತಾಳೆಯಾಗುತ್ತದೆ. ಇದಕ್ಕೆ ಅನುಗುಣವಾಗಿ, ಈ ರಾಷ್ಟ್ರೀಯ ಯುವ ದಿನದಂದು, ಪ್ರಧಾನಮಂತ್ರಿಯವರು ರಾಷ್ಟ್ರದ ಭವಿಷ್ಯದ ನಾಯಕರನ್ನು ಪ್ರೇರೇಪಿಸಲು, ಉತ್ತೇಜಿಸಲು ಮತ್ತು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ನವೀನ ಚಿಂತನೆಯ ಯುವ ನಾಯಕರು ಪ್ರಧಾನಮಂತ್ರಿಯವರ ಮುಂದೆ ಭಾರತದ ಅಭಿವೃದ್ಧಿಗೆ ನಿರ್ಣಾಯಕವಾದ ಹತ್ತು ವಿಷಯಾಧಾರಿತ ಕ್ಷೇತ್ರಗಳನ್ನು ಪ್ರತಿನಿಧಿಸುವ ಹತ್ತು ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ನೀಡುತ್ತಾರೆ. ಈ ಪ್ರಸ್ತುತಿಗಳು ಭಾರತದ ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಲು ಯುವ ನಾಯಕರು ಪ್ರಸ್ತಾಪಿಸಿದ ನವೀನ ಆಲೋಚನೆಗಳು ಮತ್ತು ಪರಿಹಾರಗಳನ್ನು ಪ್ರತಿಬಿಂಬಿಸುತ್ತವೆ.
ಪಾಲ್ಗೊಂಡವರು ಹತ್ತು ವಿಷಯಗಳ ಮೇಲೆ ಬರೆದ ಅತ್ಯುತ್ತಮ ಪ್ರಬಂಧಗಳ ಸಂಕಲನವನ್ನೂ ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದರು. ಈ ವಿಷಯಗಳು ತಂತ್ರಜ್ಞಾನ, ಸುಸ್ಥಿರತೆ, ಮಹಿಳಾ ಸಬಲೀಕರಣ, ಉತ್ಪಾದನೆ ಮತ್ತು ಕೃಷಿಯಂತಹ ವೈವಿಧ್ಯಮಯ ಕ್ಷೇತ್ರಗಳನ್ನು ಒಳಗೊಂಡಿವೆ.
ಒಂದು ವಿಶಿಷ್ಟ ಸನ್ನಿವೇಶದಲ್ಲಿ, ಪ್ರಧಾನಮಂತ್ರಿಯವರು ಯುವ ನಾಯಕರೊಂದಿಗೆ ಭೋಜನಕ್ಕೆ ಸೇರಿಕೊಂಡರು, ಅವರ ಆಲೋಚನೆಗಳು, ಅನುಭವಗಳು ಮತ್ತು ಆಕಾಂಕ್ಷೆಗಳನ್ನು ನೇರವಾಗಿ ತಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿದರು. ಈ ವೈಯಕ್ತಿಕ ಸಂವಾದವು ಆಡಳಿತ ಮತ್ತು ಯುವ ಆಕಾಂಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ, ಭಾಗವಹಿಸುವವರಲ್ಲಿ ಮಾಲೀಕತ್ವ ಮತ್ತು ಜವಾಬ್ದಾರಿಯ ಆಳವಾದ ಪ್ರಜ್ಞೆಯನ್ನು ಬೆಳೆಸುತ್ತದೆ.
ಜನವರಿ 11 ರಿಂದ ಪ್ರಾರಂಭವಾಗುವ ಸಂವಾದದಲ್ಲಿ, ಯುವ ನಾಯಕರು ಸ್ಪರ್ಧೆಗಳು, ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಮತ್ತು ವಿಷಯಾಧಾರಿತ ಪ್ರಸ್ತುತಿಗಳಲ್ಲಿ ತೊಡಗಲಿದ್ದಾರೆ. ಇದು ಮಾರ್ಗದರ್ಶಕರು ಮತ್ತು ಡೊಮೇನ್ ತಜ್ಞರ ನೇತೃತ್ವದ ತೀರ್ಮಾನಿಸಲಾದ ವಿಷಯಗಳ ಬಗ್ಗೆ ಚರ್ಚೆಗಳನ್ನು ಸಹ ಒಳಗೊಂಡಿದೆ. ಭಾರತದ ಆಧುನಿಕ ಪ್ರಗತಿಯನ್ನು ಸಂಕೇತಿಸುವ ಸಾಂಸ್ಕೃತಿಕ ಪ್ರದರ್ಶನಗಳು ಸಹ ಇರುತ್ತವೆ.
ದೇಶಾದ್ಯಂತದ ಅತ್ಯಂತ ಪ್ರೇರೇಪಿತ ಮತ್ತು ಕ್ರಿಯಾತ್ಮಕ ಯುವ ಧ್ವನಿಗಳನ್ನು ಗುರುತಿಸಲು ಮತ್ತು ಪ್ರದರ್ಶಿಸಲು ನಿಖರವಾಗಿ ರಚಿಸಿದ, ಅರ್ಹತೆ ಆಧಾರಿತ ಬಹು ಹಂತದ ಆಯ್ಕೆ ಪ್ರಕ್ರಿಯೆಯಾದ ವಿಕ್ಷಿತ್ ಭಾರತ್ ಚಾಲೆಂಜ್ ಮೂಲಕ ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಸಂವಾದದಲ್ಲಿ ಭಾಗವಹಿಸಲು 3,000 ಕ್ರಿಯಾತ್ಮಕ ಮತ್ತು ಪ್ರೇರಿತ ಯುವಜನರನ್ನು ಆಯ್ಕೆ ಮಾಡಲಾಗಿದೆ. ಇದು 15 ರಿಂದ 29 ವರ್ಷ ವಯಸ್ಸಿನ ವಯೋಮಿತಿಯೊಂದಿಗೆ ಭಾಗವಹಿಸುವವರೊಂದಿಗೆ ಮೂರು ಹಂತಗಳನ್ನು ಒಳಗೊಂಡಿತ್ತು. ಮೊದಲ ಹಂತವಾದ ವಿಕ್ಷಿತ್ ಭಾರತ್ ರಸಪ್ರಶ್ನೆಯನ್ನು ಎಲ್ಲಾ ರಾಜ್ಯಗಳ ಯುವಕಜನರಿಗಾಗಿ 12 ಭಾಷೆಗಳಲ್ಲಿ ನಡೆಸಲಾಯಿತು ಮತ್ತು ಸುಮಾರು 30 ಲಕ್ಷ ಯುವ ಮನಸ್ಸುಗಳು ಭಾಗವಹಿಸಿದ್ದವು. ಅರ್ಹ ರಸಪ್ರಶ್ನೆ ಸ್ಪರ್ಧಿಗಳು 2 ನೇ ಹಂತ, ಪ್ರಬಂಧ ಸುತ್ತಿಗೆ ಪ್ರಗತಿ ಸಾಧಿಸಿದರು, ಅಲ್ಲಿ ಅವರು “ವಿಕಸಿತ ಭಾರತ” ನ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಿರ್ಣಾಯಕವಾದ ಹತ್ತು ಪ್ರಮುಖ ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು, ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಪ್ರಬಂಧಗಳನ್ನು ಸಲ್ಲಿಸಲಾಯಿತು. 3 ನೇ ಹಂತ, ರಾಜ್ಯ ಸುತ್ತುಗಳಲ್ಲಿ, ಪ್ರತಿ ವಿಷಯಕ್ಕೆ 25 ಅಭ್ಯರ್ಥಿಗಳು ಕಠಿಣ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಮುನ್ನಡೆದರು. ಪ್ರತಿ ರಾಜ್ಯವು ಪ್ರತಿ ಕ್ಷೇತ್ರದಿಂದ ತನ್ನ ಅಗ್ರ ಮೂರು ಸ್ಪರ್ಧಿಗಳನ್ನು ಗುರುತಿಸಿತು, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಕ್ರಿಯಾತ್ಮಕ ತಂಡಗಳನ್ನು ರಚಿಸಿತು.
ವಿಕಸಿತ ಭಾರತ ಚಾಲೆಂಜ್ ಟ್ರ್ಯಾಕ್ ನಿಂದ 1,500 ಸ್ಪರ್ಧಿಗಳು, ರಾಜ್ಯ ಚಾಂಪಿಯನ್ ಶಿಪ್ ನ ಅಗ್ರ 500 ತಂಡಗಳನ್ನು ಪ್ರತಿನಿಧಿಸುತ್ತಾರೆ; ರಾಜ್ಯ ಮಟ್ಟದ ಯುವ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ ಕುರಿತ ಪ್ರದರ್ಶನಗಳ ಮೂಲಕ ಸಾಂಪ್ರದಾಯಿಕ ಟ್ರ್ಯಾಕ್ ನಿಂದ 1,000 ಭಾಗವಹಿಸುವವರನ್ನು ಆಯ್ಕೆ ಮಾಡಲಾಗಿದೆ; ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅದ್ಭುತ ಕೊಡುಗೆಗಳಿಗಾಗಿ ಆಹ್ವಾನಿಸಲಾದ 500 ಪಾಥ್ ಬ್ರೇಕರ್ ಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ.
*****
India's Yuva Shakti is driving remarkable transformations. The Viksit Bharat Young Leaders Dialogue serves as an inspiring platform, uniting the energy and innovative spirit of our youth to shape a developed India. #VBYLD2025 https://t.co/gjIqBbyuFU
— Narendra Modi (@narendramodi) January 12, 2025
The strength of India's Yuva Shakti will make India a developed nation. pic.twitter.com/GoF0uLZK0g
— PMO India (@PMOIndia) January 12, 2025
India is accomplishing its goals in numerous sectors well ahead of time. pic.twitter.com/idaPkm6u83
— PMO India (@PMOIndia) January 12, 2025
Achieving ambitious goals requires the active participation and collective effort of every citizen of the nation. pic.twitter.com/Edxnx84TSc
— PMO India (@PMOIndia) January 12, 2025
भारत के युवा की सोच का विस्तार आसमान से भी ऊंचा है। pic.twitter.com/uHkgt8ZYEU
— PMO India (@PMOIndia) January 12, 2025
A developed India will be one that is empowered economically, strategically, socially and culturally. pic.twitter.com/ieYuPmauIn
— PMO India (@PMOIndia) January 12, 2025
भारत की युवाशक्ति विकसित भारत का सपना जरूर साकार करेगी। pic.twitter.com/oPHpGh7F6S
— PMO India (@PMOIndia) January 12, 2025
Witnessing a series of insightful presentations on women empowerment, sports, culture, StartUps, infrastructure development and more at the Viksit Bharat Young Leaders Dialogue 2025! India is truly blessed to have such a talented Yuva Shakti. #VBYLD2025 pic.twitter.com/los1xTP20D
— Narendra Modi (@narendramodi) January 12, 2025
आज देश तेजी से अपने लक्ष्यों को हासिल कर रहा है। बीते 10 वर्षों में देशवासियों ने संकल्प से सिद्धि के ऐसे कई बड़े उदाहरण देखे हैं… pic.twitter.com/UKEfo9kump
— Narendra Modi (@narendramodi) January 12, 2025
विकसित भारत यंग लीडर्स डायलॉग में हमारे युवा साथियों ने जो आइडियाज दिए हैं, उनमें हमारे देश की मिट्टी की महक है। pic.twitter.com/7PFiiP9DKf
— Narendra Modi (@narendramodi) January 12, 2025
आज देश का युवा असंभव को संभव बना रहा है। इसलिए मैं पूरे आत्मविश्वास के साथ कह सकता हूं कि हमारी युवाशक्ति विकसित भारत का सपना जरूर साकार करेगी। pic.twitter.com/bmYKpR0PQY
— Narendra Modi (@narendramodi) January 12, 2025
बीते 10 वर्षों में हमारे प्रयासों से 25 करोड़ लोग गरीबी से बाहर निकले हैं और वो दिन दूर नहीं है, जब पूरा भारत गरीबी से मुक्त होगा। pic.twitter.com/pKMSpoG0VW
— Narendra Modi (@narendramodi) January 12, 2025
मैं आज पूरे विश्वास से कह रहा हूं कि हमारी युवा पीढ़ी ना सिर्फ देश के इतिहास का सबसे बड़ा परिवर्तन करेगी, बल्कि उसकी सबसे बड़ी लाभार्थी भी बनेगी। pic.twitter.com/O03icdLWZz
— Narendra Modi (@narendramodi) January 12, 2025
विकसित भारत यंग लीडर्स डायलॉग के मौके पर आयोजित प्रदर्शनी में अपने युवा साथियों के इनोवेटिव प्रयासों और अद्भुत प्रतिभा का साक्षी बना। pic.twitter.com/UErtAb1hqp
— Narendra Modi (@narendramodi) January 12, 2025
The enthusiasm and optimism I saw also highlight the immense potential of our youth as changemakers driving the nation forward.
— Narendra Modi (@narendramodi) January 12, 2025
I also told my young friends that the ownership of this Viksit Bharat movement is with them and the success of today’s programme further cements it! pic.twitter.com/ZavG1UihYj
India’s youth are the harbingers of a Viksit Bharat, brimming with innovation, passion and a deep commitment to the nation’s progress.
— Narendra Modi (@narendramodi) January 12, 2025
The Viksit Bharat Young Leaders Dialogue illustrated this spirit. Today’s programme was one of the most memorable, where we collectively… pic.twitter.com/TToLIeIkKq