ಭಾರತವು ಎಐ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ, ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಜಗತ್ತು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ನಮ್ಮ ಯುವ ಶಕ್ತಿಯ ಮೇಲೆ ಪಣತೊಡಲು ಬರಬೇಕೆಂದು ಒತ್ತಾಯಿಸಿದರು.
ಗೂಗಲ್ ಮತ್ತು ಆಲ್ಫಾಬೆಟ್ ಗಳ ಸಿಇಒ ಶ್ರೀ ಸುಂದರ್ ಪಿಚೈ ಅವರನ್ನು ಭೇಟಿ ಮಾಡಿದ್ದಕ್ಕೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಪಿಚೈ ಅವರು ಎಕ್ಸ್ ತಾಣದಲ್ಲಿ ತಿಳಿಸಿದ ಸಂದೇಶಕ್ಕೆ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ:
“@sundarpichai ಅವರೇ, ನಿಮ್ಮನ್ನು ಭೇಟಿಯಾಗಿದ್ದಕ್ಕಾಗಿ ಸಂತೋಷವಾಗಿದೆ. ಭಾರತವು ಎಐ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ಬಳಸಿಕೊಳ್ಳುತ್ತಿದೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಮತ್ತು ನಮ್ಮ ಯುವ ಶಕ್ತಿಯ ಮೇಲೆ ಪಣತೊಡಲು ನಾವು ಜಗತ್ತನ್ನು ಒತ್ತಾಯಿಸುತ್ತೇವೆ!”
*****
Glad to have met you @sundarpichai. India is making remarkable strides in AI, leveraging it for public good. We urge the world to come and invest in our nation and bet on our Yuva Shakti! https://t.co/VHMUj0eUGs
— Narendra Modi (@narendramodi) February 12, 2025