ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತದ ಪ್ಯಾಶ್ಚರ್ ಸಂಸ್ಥೆಗೆ (ಪಿ.ಐ.ಐ.) ತಮಿಳುನಾಡಿನ ಕೂನೂರಿನಲ್ಲಿ ಹೊಸ ವೈರಲ್ ಲಸಿಕೆ ತಯಾರಿಕಾ ಘಟಕ ಸ್ಥಾಪಿಸುವುದಕ್ಕಾಗಿ 30 ಎಕರೆ ಭೂಮಿ ನೀಡುವ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿತು.
ಈ ಯೋಜನೆಯು ವೈರಲ್ ಲಸಿಕೆಗಳನ್ನು ( ಟಿ.ಸಿ.ಎ.-ದಢಾರ ನಿರೋಧಕ ಲಸಿಕೆ, ಜೆ.ಇ. ಲಸಿಕೆ ಇತ್ಯಾದಿ ) ವಿಷ ನಿರೋಧಕ (ಹಾವಿನ ವಿಷ ನಿರೋಧಕ ಮತ್ತು ರೇಬಿಸ್ ನಿರೋಧಕ) ಲಸಿಕೆಗಳನ್ನು ಪಿ.ಐ.ಐ. ಯ ಕೂನೂರು ಘಟಕದಲ್ಲಿ ತಯಾರಿಸುವ ಉದ್ದೇಶವನ್ನು ಹೊಂದಿದೆ. ಭೂಮಿಯನ್ನು ಯೋಜನೆಗೆ ಉಚಿತವಾಗಿ ವರ್ಗಾಯಿಸಲಾಗುತ್ತದೆ.
ಯೋಜನೆಗೆ ಒದಗಿಸುವ ಭೂಮಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ’ಕೈಗಾರಿಕಾ’ ಉದ್ದೇಶದಿಂದ “ಸಾಂಸ್ಥಿಕ” ಎಂದು ಪರಿವರ್ತಿಸಲಿದೆ.
ಪ್ರಯೋಜನಗಳು:
ಭೂಮಿ ಮಂಜೂರಾತಿಯಿಂದ ಮಕ್ಕಳ ಜೀವ ರಕ್ಷಕ ಲಸಿಕೆಗಳ ಉತ್ಪಾದನೆಗೆ ಬೆಂಬಲ ದೊರೆಯಲಿದೆ, ದೇಶದ ಲಸಿಕೆ ಸುರಕ್ಷೆ ಬಲಗೊಳ್ಳಲಿದೆ ಮತ್ತು ವೆಚ್ಚ ಕಡಿತವಾಗಲಿದೆ. ಈಗ ಇವುಗಳನ್ನು ಆಮದು ಮಾಡಲಾಗುತ್ತಿದ್ದು ಇದು ಆಮದಿಗೆ ಪರ್ಯಾಯವಾಗಲಿದೆ.