ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೋ ಸಂದೇಶದ ಮೂಲಕ ಇಂದು “ಜಟಿರ್ ಪಿತಾ” ಬಂಗಬಂಧು, ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶೇಖ್ ಮುಜಿಬುರ್ ರಹಮಾನ್ ಅವರನ್ನು ಕಳೆದ ಶತಮಾನದ ಅತ್ಯಂತ ಶ್ರೇಷ್ಟ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು “ ಅವರ ಇಡೀ ಜೀವನ ನಮ್ಮೆಲ್ಲರಿಗೂ ಭಾರೀ ಸ್ಪೂರ್ತಿದಾಯಕ “ ಎಂದೂ ಹೇಳಿದರು.
ಬಂಗಬಂಧುವನ್ನು ಧೈರ್ಯಶಾಲೀ, ಬದ್ದತೆಯ ಮನುಷ್ಯ , ಶಾಂತಿಯ ಸಂತ ಎಂದು ಬಣ್ಣಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಬಾಂಗ್ಲಾ ದೇಶದ “ಜಟಿರ್ ಪಿತಾ” ಅವರು ಆ ಕಾಲದ ಯುವ ಜನತೆಗೆ ದೇಶ ವಿಮೋಚನೆಯ ಸವಾಲುಗಳನ್ನು ಎದುರಿಸಲು ಪ್ರೇರಣೆ ಒದಗಿಸಿದರು ಎಂದೂ ಹೇಳಿದರು.
ಎಲ್ಲಾ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿ ದಮನಕಾರಿ ಹಾಗು ಕ್ರೂರ ಆಡಳಿತ “ಬಾಂಗ್ಲಾ ಭೂಮಿ” ಯ ಮೇಲೆ ಅನ್ಯಾಯ ಎಸಗಿತು ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ಬಂಗಬಂಧು ಅವರು ಹೇಗೆ ತಮ್ಮ ಜೀವನದ ಪ್ರತೀ ಕ್ಷಣಗಳನ್ನು ಬಾಂಗ್ಲಾ ದೇಶವನ್ನು ಅಂತಹ ಮಾರಣ ಹೋಮದ ಹಂತದಿಂದ ಹೊರಗೆ ತರಲು ಮುಡಿಪಾಗಿಟ್ಟರು ಮತ್ತು ಅದನ್ನು ಧನಾತ್ಮಕ ಹಾಗು ಪ್ರಗತಿಪರ ಸಮಾಜವಾಗಿ ರೂಪಿಸಿದರು ಎಂಬುದನ್ನೂ ಸ್ಮರಿಸಿಕೊಂಡರು.
“ಬಂಗಬಂಧು ಅವರು ನಕಾರಾತ್ಮಕತೆ ಮತ್ತು ದ್ವೇಷ ಯಾವ ಕಾಲಕ್ಕೂ ದೇಶದ ಅಭಿವೃದ್ದಿಗೆ ಅಸ್ತಿಭಾರ ಆಗಲಾರದು ಎಂಬುದನ್ನು ಸ್ಪಷ್ಟವಾಗಿ ಅರಿತಿದ್ದರು. ಆದರೆ ಬಂಗಬಂಧು ಅವರ ಚಿಂತನೆಗಳು ಮತ್ತು ಪ್ರಯತ್ನಗಳನ್ನು ಕೆಲವು ಜನರು ಮೆಚ್ಚುತ್ತಿರಲಿಲ್ಲ, ಅವರು ಅವರನ್ನು ನಮ್ಮಿಂದ ದೂರ ಕೊಂಡೊಯ್ದರು” ಎಂದು ಪ್ರಧಾನ ಮಂತ್ರಿ ಹೇಳಿದರು.
“ ಭಯೋತ್ಪಾದನೆ ಮತ್ತು ರಾಜಕೀಯದ ಹಾಗು ರಾಜತಾಂತ್ರಿಕತೆಯ ಹಿಂಸಾ ಆಯುಧಗಳು ಸಮಾಜ ಮತ್ತು ರಾಷ್ಟ್ರವನ್ನು ನಿರ್ನಾಮ ಮಾಡುತ್ತವೆ ಹೇಗೆಂಬುದಕ್ಕೆ ನಾವೆಲ್ಲಾ ಸಾಕ್ಷೀಭೂತರಾಗಿದ್ದೇವೆ ಎಂದು ನುಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾ ದೇಶ ಹೊಸ ಎತ್ತರಕ್ಕೆ ಬೆಳೆಯುತ್ತಿರುವಾಗ , ಭಯೋತ್ಪಾದನೆಯ ಮತ್ತು ಹಿಂಸೆಯ ಬೆಂಬಲಿಗರನ್ನು ಈಗ ಎಲ್ಲಿ ಇಡಲಾಗಿದೆ ಮತ್ತು ಅವರು ಎಂತಹ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ವಿಶ್ವ ಗಮನಿಸುತ್ತಿದೆ ಎಂದೂ ಹೇಳಿದರು.
ಶೇಖ್ ಮುಜಿಬುರ್ ರಹಮಾನ್ ಕಂಡ ಕನಸಿನಂತೆ “ಶೋನಾರ್ ಬಾಂಗ್ಲಾ” ರಾಷ್ಟ್ರ ನಿರ್ಮಾಣದಲ್ಲಿ ಹಗಲು ರಾತ್ರಿ ಅರ್ಪಣಾ ಭಾವದಿಂದ ತೊಡಗಿಕೊಂಡಿರುವ ಬಾಂಗ್ಲಾ ದೇಶದ ಜನತೆಯನ್ನು ನೋಡಿರುವುದಕ್ಕೆ ಪ್ರಧಾನ ಮಂತ್ರಿ ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು
ಬಂಗಬಂಧು ಅವರ ಪ್ರೇರಣೆಯಿಂದ ಗೌರವಾನ್ವಿತ ಶೇಖ್ ಹಸೀನಾ ನಾಯಕತ್ವದಲ್ಲಿ ಬಾಂಗ್ಲಾ ದೇಶ ಒಳಗೊಳ್ಳುವಿಕೆ ಮತ್ತು ಅಭಿವೃದ್ಧಿ ಆಧಾರಿತ ನೀತಿಗಳ ಮೂಲಕ ಸಾಧಿಸಿದ ಪ್ರಗತಿಯನ್ನು ಪ್ರಧಾನ ಮಂತ್ರಿ ಅವರು ಶ್ಲಾಘಿಸಿದರು. ಆರ್ಥಿಕತೆ ಮತ್ತು ಇತರ ಸಾಮಾಜಿಕ ಅಥವಾ ಕ್ರೀಡಾ ಮಾನದಂಡಗಳನ್ವಯ ಬಾಂಗ್ಲಾ ದೇಶವು ಹೊಸ ಗುಣ ಮಾನದಂಡಗಳನ್ನು ರೂಪಿಸುತ್ತಿದೆ ಎಂದ ಪ್ರಧಾನ ಮಂತ್ರಿ ಅವರು ಕೌಶಲ್ಯ, ಶಿಕ್ಷಣ, ಆರೋಗ್ಯ, ಮಹಿಳಾ ಸಶಕ್ತೀಕರಣ ಮತ್ತು ಕಿರು ಹಣಕಾಸು ಕ್ಷೇತ್ರ ಸಹಿತ ಅನೇಕ ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅಭೂತಪೂರ್ವ ಪ್ರಗತಿಯನ್ನು ಕೊಂಡಾಡಿದರು.
“ಕಳೆದ ಕೆಲವು ವರ್ಷಗಳಲ್ಲಿ, ಭಾರತ ಮತ್ತು ಬಾಂಗ್ಲಾ ದೇಶಗಳು ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಸುವರ್ಣ ಅಧ್ಯಾಯವನ್ನು ಬರೆದಿವೆ ಮತ್ತು ನಮ್ಮ ಸಹಭಾಗಿತ್ವಕ್ಕೆ ಹೊಸ ಆಯಾಮ ಮತ್ತು ದಿಕ್ಕನ್ನು ನೀಡಿವೆ “ ಎಂದು ಹೇಳಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವೆ ನಂಬಿಕೆ ವೃದ್ಧಿಸಿದ್ದರಿಂದ ಸಂಕೀರ್ಣ ಗಡಿ ವಿಷಯಗಳನ್ನು ಪರಸ್ಪರ ಸ್ನೇಹದಿಂದ ಪರಿಹರಿಸುವುದಕ್ಕೆ ಸಾಧ್ಯವಾಗಿದೆ ಎಂದೂ ನುಡಿದರು.
ದಕ್ಷಿಣ ಏಷ್ಯಾದಲ್ಲಿ ಭಾರತವು ಬಾಂಗ್ಲಾದೇಶದ ಅತ್ಯಂತ ದೊಡ್ದ ವ್ಯಾಪಾರೀ ಸಹಭಾಗಿಯಾಗಿರುವುದು ಮಾತ್ರವಲ್ಲ, ಅದು ಅಭಿವೃದ್ದಿಯ ಸಹಭಾಗಿಯೂ ಆಗಿದೆ ಎಂದರು. ವಿದ್ಯುತ್ ವಿತರಣೆ, ಸ್ನೇಹಾಚಾರದ ಮೂಲಕ ಕೊಳವೆ ಮಾರ್ಗ, ರೈಲು, ರಸ್ತೆ, ಅಂತರ್ಜಾಲ, ಆಕಾಶ ಮಾರ್ಗ, ಜಲಮಾರ್ಗ ಸಹಿತ ಹಲವು ಸಂಪರ್ಕ ವೃದ್ದಿಯ ವಲಯಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಪಟ್ಟಿ ಮಾಡಿದ ಅವರು ಇವುಗಳಿಂದ ಉಭಯದೇಶಗಳ ಬಹಳಷ್ಟು ಜನತೆಗೆ ಸಂಪರ್ಕ ಲಭ್ಯವಾಗಿದೆ ಎಂದರು.
ಟ್ಯಾಗೋರ್, ಖ್ವಾಜಿ ನಜ್ರುಲ್ ಇಸ್ಲಾಂ, ಉಸ್ತಾದ್ ಅಲ್ಲಾವುದ್ದೀನ್ ಖಾನ್ , ಲಾಲೋನ್ ಶಾ, ಜಿಬಾನಂದ ದಾಸ್ ಮತ್ತು ಈಶ್ವರ್ ಚಂದ್ರ ವಿದ್ಯಾಸಾಗರ ಅವರಂತಹ ಬುದ್ದಿಜೀವಿಗಳಿಂದ ಉಭಯ ದೇಶಗಳ ಪರಂಪರೆ ರೂಪುಗೊಂಡಿತು ಎಂಬುದನ್ನು ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.
ಬಂಗಬಂಧು ಅವರ ಪ್ರೇರಣೆ ಮತ್ತು ಆಡಳಿತ ಉಭಯದೇಶಗಳ ಪರಂಪರೆಯನ್ನು ಹೆಚ್ಚು ಸಮಗ್ರಗೊಳಿಸಿದೆ , ಬಲವಾಗಿ ಬೇರೂರುವಂತೆ ಮಾಡಿದೆ ಮತ್ತು ಬಂಗಬಂಧು ಅವರು ತೋರಿಸಿದ ಹಾದಿ ಕಳೆದ ದಶಕಗಳಲ್ಲಿ ಉಭಯದೇಶಗಳ ಸಹಭಾಗಿತ್ವ, ಪ್ರಗತಿ, ಮತ್ತು ಸಮೃದ್ದಿಗೆ ಬಲವಾದ ಅಸ್ತಿಭಾರ ಹಾಕಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು.
ಉಭಯದೇಶಗಳ ಮುಂದಿನ ಮೈಲಿಗಲ್ಲುಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು, ಮುಂದಿನ ವರ್ಷ ಬಾಂಗ್ಲಾ ದೇಶ ವಿಮೋಚನೆಯ 50 ನೇ ವಾರ್ಷಿಕೋತ್ಸವ ಮತ್ತು 2022 ರಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಗಳು ನಡೆಯಲಿವೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ಈ ಎರಡೂ ಪ್ರಮುಖ ಘಟನೆಗಳು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಅಭಿವೃದ್ದಿಯ ಶಕೆಯನ್ನು ತರುವುದು ಮಾತ್ರವಲ್ಲ ಉಭಯ ದೇಶಗಳ ನಡುವಣ ಗೆಳೆತನದ ಬಾಂಧವ್ಯವನ್ನು ಬಲಪಡಿಸಲಿವೆ ಎಂಬ ಬಗ್ಗೆಯೂ ಭರವಸೆ ವ್ಯಕ್ತಪಡಿಸಿದರು.
शेख हसीना जी ने मुझे इस ऐतिहासिक समारोह का हिस्सा बनने के लिए व्यक्तिगत तौर पर निमंत्रण दिया था।
— PMO India (@PMOIndia) March 17, 2020
लेकिन कोरोना वायरस की वजह से ये संभव नहीं हो पाया।
फिर शेख हसीना जी ने ही विकल्प दिया, और इसलिए मैं वीडियो के माध्यम से आपसे जुड़ रहा हूं: PM @narendramodi
बंगबंधु शेख मुजीबुर-रहमान पिछली सदी के महान व्यक्तित्वों में से एक थे। उनका पूरा जीवन, हम सभी के लिए बहुत बड़ी प्रेरणा है: PM @narendramodi
— PMO India (@PMOIndia) March 17, 2020
आज मुझे बहुत खुशी होती है, जब देखता हूं कि बांग्लादेश के लोग, किस तरह दिन-रात अपने प्यारे देश को शेख मुजीबुर-रहमान के सपनों का ‘शोनार-बांग्ला’ बनाने में जुटे हुए हैं: PM @narendramodi
— PMO India (@PMOIndia) March 17, 2020
एक दमनकारी, अत्याचारी शासन ने, लोकतांत्रिक मूल्यों को नकारने वाली व्यवस्था ने, किस तरह बांग्ला भूमि के साथ अन्याय किया, उसके लोगों को तबाह किया, ये हम सभी भली-भांति जानते हैं: PM @narendramodi
— PMO India (@PMOIndia) March 17, 2020
उस दौर में जो तबाही मचाई गई थी, जो Genocide हुआ, उससे बांग्लादेश को बाहर निकालने के लिए, एक Positive और Progressive Society के निर्माण के लिए उन्होंने अपना पल-पल समर्पित कर दिया था: PM @narendramodi
— PMO India (@PMOIndia) March 17, 2020
बंगबंधु की प्रेरणा से और प्रधानमंत्री शेख हसीना जी के नेतृत्व में बांग्लादेश आज जिस प्रकार Inclusive और Development Oriented Policies के साथ आगे बढ़ रहा है, वो बहुत प्रशंसनीय है: PM @narendramodi
— PMO India (@PMOIndia) March 17, 2020
मुझे इस बात की भी खुशी है कि बीते 5-6 वर्षों में भारत और बांग्लादेश ने आपसी रिश्तों का भी शोनाली अध्याय गढ़ा है, अपनी पार्टनरशिप को नई दिशा, नए आयाम दिए हैं: PM @narendramodi
— PMO India (@PMOIndia) March 17, 2020
ये हम दोनों देशों में बढ़ता हुआ विश्वास है, जिसके कारण हम दशकों से चले आ रहे Land Boundary, Maritime Boundary से जुड़े Complex मुद्दों को, शांति से सुलझाने में सफल रहे हैं: PM @narendramodi
— PMO India (@PMOIndia) March 17, 2020
बांग्लादेश आज साउथ एशिया में भारत का सबसे बड़ा ट्रेडिंग पार्टनर भी है और सबसे बड़ा डेवलपमेंट पार्टनर भी है।
— PMO India (@PMOIndia) March 17, 2020
भारत में बनी बिजली से बांग्लादेश के लाखों घर और फैक्ट्रियां रोशन हो रही है। Friendship Pipeline के माध्यम से एक नया Dimension हमारे रिश्तों में जुड़ा है: PM @narendramodi
हमारी विरासत टैगोर की है, काज़ी नज़रुल इस्लाम, उस्ताद अलाउद्दीन खान, लालॉन शाह, जीबानंदा दास और ईश्वर चंद्र विद्यासागर जैसे मनीषियों की है।
— PMO India (@PMOIndia) March 17, 2020
इस विरासत को बंगबंधु की प्रेरणा, उनकी Legacy ने और व्यापकता दी है: PM @narendramodi
भारत और बांग्लादेश के आत्मीय संबंध, इस साझा विरासत की मज़बूत नींव पर ही गढ़े गए हैं।
— PMO India (@PMOIndia) March 17, 2020
हमारी यही विरासत, हमारे आत्मीय संबंध, बंगबंधु का दिखाया मार्ग, इस दशक में भी दोनों देशों की Partnership, Progress और Prosperity का मजबूत आधार हैं: PM @narendramodi
अगले वर्ष बांग्लादेश की ‘मुक्ति’ के 50 वर्ष होंगे और उससे अगले वर्ष यानि 2022 में भारत की आज़ादी के 75 वर्ष होने वाले हैं।
— PMO India (@PMOIndia) March 17, 2020
मुझे विश्वास है कि ये दोनों पड़ाव, भारत-बांग्लादेश के विकास को नई ऊँचाई पर पहुंचाने के साथ ही, दोनों देशों की मित्रता को भी नई बुलंदी देंगे: PM @narendramodi