Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಖತಾರ್ ನಡುವಿನ ಒಪ್ಪಂದದ ಸ್ಥೀರಿಕರಣಕ್ಕೆ ಹಾಗೂ ಅಂಕಿತಕ್ಕೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಖತಾರ್ ನಡುವಿನ ಒಪ್ಪಂದದ ಸ್ಥೀರಿಕರಣಕ್ಕೆ ಹಾಗೂ ಅಂಕಿತಕ್ಕೆ ತನ್ನ ಸಮ್ಮತಿ ಸೂಚಿಸಿದೆ.

ಕಸ್ಟಮ್ಸ್ ವಿಷಯದಲ್ಲಿ ಭಾರತ ಮತ್ತು ಖತಾರ್ ನಡುವಿನ ಸಹಕಾರಕ್ಕಾಗಿ ದ್ವಿಪಕ್ಷೀಯ ಒಪ್ಪಂದದ ಗುರಿಯನ್ನು ಈ ಒಪ್ಪಂದ ಒಳಗೊಂಡಿದೆ.
ಈ ಒಪ್ಪಂದವು ಕಸ್ಟಮ್ಸ್ ಅಪರಾಧಗಳ ತಡೆ ಮತ್ತು ವಿಚಾರಣೆಗೆ ಸೂಕ್ತ ಮಾಹಿತಿಯ ಲಭ್ಯತೆಗೆ ಸಹಕಾರಿಯಾಗಲಿದೆ. ಎರಡೂ ರಾಷ್ಟ್ರಗಳ ನಡುವೆ ನಡೆದ ಸರಕು ವ್ಯಾಪಾರದ ಸಮರ್ಥ ವಿಲೇವಾರಿಯ ಖಾತ್ರಿ ಹಾಗೂ ವಾಣಿಜ್ಯಕ್ಕೆ ಒಪ್ಪಂದ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹಿನ್ನೆಲೆ:

ಖತಾರ್ ಭಾರತದ ಮಹತ್ವದ ವಾಣಿಜ್ಯ ಪಾಲುದಾರ ರಾಷ್ಟ್ರವಾಗಿದೆ. ಹಲವು ವರ್ಷಗಳ ಅವಧಿಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ವಾಣಿಜ್ಯ ವಿಸ್ತರಣೆಯಾಗಿದೆ.ದ್ವಿಪಕ್ಷೀಯ ವಾಣಿಜ್ಯದಲ್ಲಿ ಸ್ಥಿರವಾದ ವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಎರಡೂ ರಾಷ್ಟ್ರಗಳ ಕಸ್ಟಮ್ಸ್ ಪ್ರಾಧಿಕಾರಗಳ ನಡುವೆ ಸೂಕ್ತ ಆನ್ವಯಿಕ ಕಸ್ಟಮ್ಸ್ ಕಾನೂನುಗಳ, ಕಸ್ಟಮ್ಸ್ ಅಪರಾಧಗಳ ತಡೆ ಮತ್ತು ತನಿಖೆ ಹಾಗೂ ಕಾನೂನುಬದ್ಧ ವ್ಯಾಪಾರಕ್ಕಾಗಿ ಮಾಹಿತಿಯ ಮತ್ತು ಬೇಹಾಗಾರಿಕೆ ವಿನಿಮಯ ಮಾಡಿಕೊಳ್ಳುವುದನ್ನು ಕಾನೂನು ಚೌಕಟ್ಟಿನೊಳಗೆ ಒದಗಿಸುವುದನ್ನು ಕಡ್ಡಾಯ ಮಾಡಬೇಕೆಂದು ಅಭಿಪ್ರಾಯಪಡಲಾಗಿದೆ. ಪರಸ್ಪರ ಸಮಾಲೋಚನೆಯ ಬಳಿಕ ಈ ಒಪ್ಪಂದದ ಕರಡು ಪಠ್ಯವನ್ನು ಆಖೈರುಗೊಳಿಸಲಾಗುತ್ತದೆ. ಇದು ಕಸ್ಟಮ್ಸ್ ಮೌಲ್ಯ ಘೋಷಣೆಗೆ ಸಂಬಂಧಿಸಿದ ಮಾಹಿತಿಯ ವಿನಿಮಯ ಕ್ಷೇತ್ರದಲ್ಲಿ, ಸರಕಿನ ಮೂಲದ ಪ್ರಮಾಣಪತ್ರಗಳ ನಿಖರತೆ ಮತ್ತು ಎರಡೂ ರಾಷ್ಟ್ರಗಳ ನಡುವೆ ಆದ ಸರಕು ಮಾರಾಟದ ವಿವರಣೆಯ ವಿಚಾರದಲ್ಲಿ ಭಾರತೀಯ ಕಸ್ಟಮ್ಸ್ ನ ಕಳಕಳಿ ಮತ್ತು ಅಗತ್ಯಗಳು ರಕ್ಷಣೆ ಮಾಡಲಿದೆ