ಆಂಧ್ರಪ್ರದೇಶದ ಪುಟ್ಟಪರ್ತಿಯ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದರ್ಶನ ಮತ್ತು ಪೂಜೆ ಸಲ್ಲಿಸಿದರು.
ಶ್ರೀ ಮೋದಿಯವರು ತೆಲುಗಿನಲ್ಲಿ ರಂಗನಾಥ ರಾಮಾಯಣದ ಶ್ಲೋಕಗಳನ್ನು ಶ್ರವಣ ಮಾಡಿದರು. ನೆರಳು ಬೊಂಬೆಯಾಟದ ಕಲಾ ಪ್ರಕಾರದ ಮೂಲಕ ದೃಷ್ಟಿ – ದೃಶ್ಯಗೋಚರವಾಗಿ ಪ್ರಸ್ತುತಪಡಿಸುವ ಆಂಧ್ರಪ್ರದೇಶದ ಥೊಲು ಬೊಮ್ಮಲಾಟ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಹಾಗೂ ಪೌರಾಣಿಕ ಜಟಾಯು ಕಥೆಯನ್ನು ವೀಕ್ಷಿಸಿದರು.
ಪ್ರಧಾನಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
“ಪ್ರಭು ಶ್ರೀರಾಮನ ಭಕ್ತರಾದ ಎಲ್ಲರಿಗೂ, ಲೇಪಾಕ್ಷಿಯಲ್ಲಿ ಹೆಚ್ಚಿನ ಮಹತ್ವವಿದೆ.ಇಂದು ವೀರಭದ್ರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿದೆ. ಭಾರತದ ಜನರು ಸಂತೋಷದಿಂದ, ಆರೋಗ್ಯವಂತರಾಗಿರಲಿ ಮತ್ತು ಸಮೃದ್ಧಿಯ ಹೊಸ ಎತ್ತರಗಳನ್ನು ಏರಲಿ ಎಂದು ನಾನು ಪ್ರಾರ್ಥಿಸಿದೆ.
“ಲೇಪಾಕ್ಷಿಯ ವೀರಭದ್ರ ದೇವಸ್ಥಾನದಲ್ಲಿ, ರಂಗನಾಥ ರಾಮಾಯಣವನ್ನು ಕೇಳಿದೆ ಮತ್ತು ರಾಮಾಯಣದ ಬೊಂಬೆ ಕಥಾ ಪ್ರದರ್ಶನವನ್ನೂ ನೋಡಿದೆ.”
*****
For all those who are devotees of Prabhu Shri Ram, Lepakshi holds great significance. Today, I had the honour of praying at the the Veerbhadra Temple. I prayed that the people of India be happy, healthy and scale new heights of prosperity. pic.twitter.com/vb8AaBKNxh
— Narendra Modi (@narendramodi) January 16, 2024
At the Veerbhadra Temple, Lepakshi, heard the Ranganatha Ramayana and also saw a puppet show on the Ramayan. pic.twitter.com/PGOdJ3zmDz
— Narendra Modi (@narendramodi) January 16, 2024