ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮ (ಎನ್.ಆರ್.ಡಿ.ಡಬ್ಲ್ಯು.ಪಿ) ವನ್ನು ಮುಂದುವರಿಸಲು ಮತ್ತು ಫಲಶ್ರುತಿ ಆಧಾರಿತ, ಸ್ಪರ್ಧಾತ್ಮಕ ಹಾಗೂ ಸುಸ್ಥಿರತೆ (ಕಾರ್ಯನಿರ್ವಹಣೆ)ಯ ಮೇಲೆ ಹೆಚ್ಚಿನ ಗಮನದೊಂದಿಗೆ ನಿಗಾ ಇಡಲು ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಸೇವೆ ಪೂರೈಕೆಯ ಖಾತ್ರಿಗಾಗಿ ಅದನ್ನು ಪುನರ್ ವಿನ್ಯಾಸಗೊಳಿಸಲು ತನ್ನ ಅನುಮೋದನೆ ನೀಡಿದೆ
.
ಹದಿನಾಲ್ಕನೇ ಹಣಕಾಸು ಆಯೋಗದ (ಎಫ್.ಎಫ್.ಸಿ.) ಅವಧಿಯಲ್ಲಿ 2017-18ರಿಂದ 2019-20ರವರೆಗೆ 23,050 ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ. ಈ ಯೋಜನೆಯು ದೇಶದ ಎಲ್ಲ ಗ್ರಾಮೀಣ ಜನಸಂಖ್ಯೆಯನ್ನೂ ತಲುಪಲಿದೆ. ಪುನರ್ ವಿನ್ಯಾಸವು ಕಾರ್ಯಕ್ರಮವನ್ನು ಹೆಚ್ಚು ನಮ್ಯ, ಫಲಿತಾಂಶ ಆಧಾರಿತ, ಸ್ಪರ್ಧಾತ್ಮಕಗೊಳಿಸಲಿದೆ ಮತ್ತು ಕೊಳವೆಯ ಮೂಲಕ ಸುಸ್ಥಿರ ನೀರು ಪೂರೈಕೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಚಿವಾಲಯದ ಗುರಿಯನ್ನು ತಲುಪಲು ಸಹಕಾರಿಯಾಗಲಿದೆ.
ನಿರ್ಣಯದ ವಿವರಗಳು ಈ ಕೆಳಕಂಡಂತಿವೆ :
ಎನ್.ಡಬ್ಲ್ಯು.ಕ್ಯು.ಎಸ್.ಎಂ. ಆರ್ಸಾನಿಕ್ / ಪ್ಲೋರೈಡ್ ಬಾಧಿತ ಜನವಸತಿಗ ಎಲ್ಲ ಗ್ರಾಮೀಣ ಜನಸಂಖ್ಯೆಗೆ 2021ರ ಮಾರ್ಚ್ ಅಂತ್ಯದೊಳಗೆ ಸುಸ್ಥಿರ ಆಧಾರದಲ್ಲಿ ಶುದ್ಧ ಕುಡಿಸುವ ನೀರು ತಲುಪಿಸುವ ಗುರಿಯನ್ನು ಹೊಂದಿದೆ. ಎನ್.ಆರ್.ಡಿ.ಡಬ್ಲ್ಯು.ಪಿ. ನಿಧಿಯನ್ನು ಬಳಕೆ ಮಾಡಿಕೊಳ್ಳಲು ಕಾರ್ಯಕ್ರಮದ ಅಡಿಯಲ್ಲಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ರಾಜ್ಯಗಳಿಗೆ ಹೆಚ್ಚಿನ ನಮ್ಯತೆಯನ್ನು ಒದಗಿಸಲಾಗಿದೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಮಗ್ರ ನಿರ್ವಹಣಾ ಮಾಹಿತಿ ವ್ಯವಸ್ಥೆ (ಐಎಂಐಎಸ್) ರೀತ್ಯ, ಭಾರತದ ಸುಮಾರು ಶೇ.77ರಷ್ಟು ಗ್ರಾಮೀಣ ಜನವಸತಿಗಳು ಸಂಪೂರ್ಣ ವ್ಯಾಪ್ತಿಯ (ಎಫ್.ಸಿ) ಸ್ಥಾನ (ಪ್ರತಿಯೊಬ್ಬರಿಗೂ ನಿತ್ಯ 40 ಲೀಟರ್ ನೀರು) ಗುರಿಯನ್ನು ಸಾಧಿಸಿವೆ ಮತ್ತು ಶೇ.56ರಷ್ಟು ಗ್ರಾಮೀಣ ಜನಸಂಖ್ಯೆ ಸಾರ್ವಜನಿಕ ಸ್ಟಾಂಡ್ ಪೋಸ್ಟ್ ಗಳ ಮೂಲಕ ಕೊಳಾಯಿ ನೀರು ಪಡೆಯುತ್ತಿವೆ, ಇದು ಶೇ.16.7ರಷ್ಟು ವಸತಿ ಸಂಪರ್ಕದೊಳಗೆ ಬರುತ್ತದೆ.
####