Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಅಧಿಕಾರಾವಧಿಯನ್ನು 31.03.2025ರ ನಂತರದ ಅವಧಿಯಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ (ಎನ್‌.ಸಿ.ಎಸ್‌.ಕೆ) ಅಧಿಕಾರಾವಧಿಯನ್ನು 31.03.2025ರ ನಂತರ ಮೂರು ವರ್ಷಗಳವರೆಗೆ (ಅಂದರೆ 31.03.2028 ರವರೆಗೆ) ವಿಸ್ತರಿಸಲು ಅನುಮೋದನೆ ನೀಡಿದೆ.

ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ (ಎನ್‌.ಸಿ.ಎಸ್‌.ಕೆ) ಮೂರು ವರ್ಷಗಳ ವಿಸ್ತರಣೆಯ ಒಟ್ಟು ಆರ್ಥಿಕ ಪರಿಣಾಮವು ಸರಿಸುಮಾರು ರೂ.50.91 ಕೋಟಿಯಾಗಿರುತ್ತದೆ.

ನೈರ್ಮಲ್ಯ ಕಾರ್ಮಿಕರ ಸಾಮಾಜಿಕ-ಆರ್ಥಿಕ ಉನ್ನತಿಗೆ ಅನುಕೂಲವಾಗುವಂತೆ, ನೈರ್ಮಲ್ಯ ವಲಯದಲ್ಲಿ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಅಪಾಯಕಾರಿ ಶುಚಿಗೊಳಿಸುವಿಕೆಯನ್ನು ನಿರ್ವಹಿಸುವಾಗ ಶೂನ್ಯ ಸಾವುಗಳನ್ನು ಸಾಧಿಸುವ ಗುರಿಯನ್ನು ಹೊಂದಲು ಐಟಿ ಸಹಾಯ ಮಾಡುತ್ತದೆ.

ಆಯೋಗದ ಕಾರ್ಯಗಳು

(ಎನ್‌.ಸಿ.ಎಸ್‌.ಕೆ) ಕಾರ್ಯಗಳ ಕುರಿತು ಆದೇಶ ಹೀಗಿದೆ:

(ಎ) ಸಫಾಯಿ ಕರ್ಮಚಾರಿಗಳ ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಗಳ ನಿವಾರಣೆಗೆ ನಿರ್ದಿಷ್ಟ ಕ್ರಮದ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು;

(ಬಿ) ವಿಶೇಷವಾಗಿ ಸಫಾಯಿ ಕರ್ಮಚಾರಿಗಳು ಮತ್ತು ತೋಟಿಗಳ ಸಾಮಾಜಿಕ ಮತ್ತು ಆರ್ಥಿಕ ಪುನರ್ವಸತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನದ ಅಧ್ಯಯನ ಮತ್ತು ಮೌಲ್ಯಮಾಪನ;

(ಸಿ) ನಿರ್ದಿಷ್ಟ ಕುಂದುಕೊರತೆಗಳನ್ನು ತನಿಖೆ ಮಾಡಿ ಮತ್ತು ಸಫಾಯಿ ಕರ್ಮಚಾರಿಗಳ ಯಾವುದೇ ಗುಂಪಿಗೆ ಸಂಬಂಧಿಸಿದಂತೆ (i) ಕಾರ್ಯಕ್ರಮಗಳು ಅಥವಾ ಯೋಜನೆಗಳನ್ನು ಅನುಷ್ಠಾನಗೊಳಿಸದಿರುವ ವಿಷಯದ ಸ್ವಯಂ (ಸ್ವಂತ ಚಲನೆಯ ಮೇಲೆ /ಸು-ಮೋಟು)  ಸೂಚನೆಯನ್ನು ತೆಗೆದುಕೊಳ್ಳುವುದು, (ii) ಸಫಾಯಿ ಕರ್ಮಚಾರಿಗಳ ಕಷ್ಟಗಳನ್ನು ತಗ್ಗಿಸುವ ಗುರಿಯನ್ನು ಹೊಂದಿರುವ ನಿರ್ಧಾರಗಳು, ಮಾರ್ಗಸೂಚಿಗಳು ಇತ್ಯಾದಿ;  (iii) ಸಫಾಯಿ ಕರ್ಮಚಾರಿಗಳ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗೆ ಕ್ರಮಗಳು, ಇತ್ಯಾದಿ

(ಡಿ) ಆರೋಗ್ಯ ಸುರಕ್ಷತೆ ಮತ್ತು ಸಫಾಯಿ ಕರ್ಮಚಾರಿಗಳ ವೇತನ ಸೇರಿದಂತೆ ಕೆಲಸದ ಪರಿಸ್ಥಿತಿಗಳನ್ನು ಅಧ್ಯಯನ ಮಾಡುವುದು ಮತ್ತು ಮೇಲ್ವಿಚಾರಣೆ ಮಾಡುವುದು,

(ಇ) ಸಫಾಯಿ ಕರ್ಮಚಾರಿಗಳು ಎದುರಿಸುತ್ತಿರುವ ಯಾವುದೇ ತೊಂದರೆಗಳು ಅಥವಾ ಅಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಂಡು ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತು ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ವರದಿಗಳನ್ನು ಮಾಡುವುದು;  ಮತ್ತು

 (ಎಫ್) ಕೇಂದ್ರ ಸರ್ಕಾರವು ಅದನ್ನು ಉಲ್ಲೇಖಿಸಬಹುದಾದ ಯಾವುದೇ ಇತರ ವಿಷಯ ಕುರಿತು ಕೆಲಸ ಮಾಡುವುದು.

 ತೋಟಿ (ಮ್ಯಾನುಯಲ್ ಸ್ಕ್ಯಾವೆಂಜರ್‌) ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ, 2013 ( ಎಂಎಸ್ ಕಾಯಿದೆ 2013) ನಿಬಂಧನೆಗಳ ಅಡಿಯಲ್ಲಿ, ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗ (ಎನ್‌.ಸಿ.ಎಸ್‌.ಕೆ) ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ, ಅವುಗಳೆಂದರೆ:

              i. ಕಾಯಿದೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು;

        ii ಈ ಕಾಯಿದೆಯ ನಿಬಂಧನೆಗಳ ಉಲ್ಲಂಘನೆಯ ಬಗ್ಗೆ ದೂರುಗಳನ್ನು ವಿಚಾರಣೆ ಮಾಡಲು ಮತ್ತು ಅದರ ಸಂಶೋಧನೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಮುಂದಿನ ಕ್ರಮದ ಅಗತ್ಯವಿರುವ ಶಿಫಾರಸುಗಳೊಂದಿಗೆ ತಿಳಿಸಲು;

            iii   ಈ ಕಾಯಿದೆಯ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲು;  ಮತ್ತು

            iv.  ಈ ಅಧಿನಿಯಮವನ್ನು ಅನುಷ್ಠಾನಗೊಳಿಸದಿರುವ ವಿಷಯದ ಬಗ್ಗೆ ಸ್ವಯಂ ಪ್ರೇರಿತ ಸೂಚನೆಯನ್ನು ತೆಗೆದುಕೊಳ್ಳಲು.

 ಹಿನ್ನೆಲೆ:

 ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಕಾಯಿದೆ, 1993 ಅನ್ನು ಸೆಪ್ಟೆಂಬರ್, 1993ರಲ್ಲಿ ಜಾರಿಗೊಳಿಸಲಾಯಿತು ಮತ್ತು ಸಫಾಯಿ ಕರ್ಮಚಾರಿಗಳಿಗಾಗಿ ಶಾಸನಬದ್ಧ ರಾಷ್ಟ್ರೀಯ ಆಯೋಗವನ್ನು ಆಗಸ್ಟ್, 1994ರಲ್ಲಿ ಮೊದಲ ಬಾರಿಗೆ ರಚಿಸಲಾಯಿತು.

 

*****